ಸುಳ್ಯದಲ್ಲಿ ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ

0

ಸುಳ್ಯ ಬಿಜೆಪಿಯ ಭದ್ರ ಕೋಟೆಯೆಂದು ಮತ್ತೊಮ್ಮೆ ತೋರಿಸೋಣ : ಡಾ.ರಾಮಯ್ಯ ಭಟ್

ಆತ್ಮವಿಶ್ವಾಸದಿಂದಲೇ ಚುನಾವಣೆ ಎದುರಿಸೋಣ : ಸಚಿವ ಅಂಗಾರ

ಸುಳ್ಯದಲ್ಲಿ ಭಾರತೀಯ ಜನತಾ ಪಕ್ಷದ ಚುನಾವಣಾ ಕಚೇರಿ ಉದ್ಘಾಟನಾ ಸಮಾರಂಭ ಸುಳ್ಯದ ಶ್ರೀಹರಿ ವಾಣಿಜ್ಯ ಸಂಕೀರ್ಣದಲ್ಲಿ ನಡೆಯಿತು. ಹಿರಿಯರಾದ ರಾಮಯ್ಯ ಭಟ್ ಪಂಜ ದೀಪ ಬೆಳಗಿಸಿ ಕಚೇರಿಯನ್ನು ಉದ್ಘಾಟಿಸಿದರು.

ಸಚಿವ ಎಸ್.ಅಂಗಾರ, ಮೀನುಗಾರಿಕಾ ನಿಗಮಾಧ್ಯಕ್ಷ ಎ.ವಿ. ತೀರ್ಥರಾಮ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಲಳಂಬೆ, ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ, ರಬ್ಬರ್ ಬೋರ್ಡ್ ನಿರ್ದೇಶಕ ಮುಳಿಯ ಕೇಶವ ಭಟ್, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಎಸ್.ಎನ್.ಮನ್ಮಥ, ಎನ್.ಎ. ರಾಮಚಂದ್ರ, ವೆಂಕಟ್ ದಂಬೆಕೋಡಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಶುಭದಾ ಎಸ್ ರೈ, ಪುಷ್ಪಾವತಿ ಬಾಳಿಲ, ಮೋಹಿನಿ ನಾಗರಾಜ್, ಶಿಲ್ಪಾ ಸುದೇವ್, ಚಂದ್ರಾ ಕೋಲ್ಚಾರ್, ಸಂತೋಷ್ ಜಾಕೆ, ಕೃಷ್ಣ ಶೆಟ್ಟಿ ಕಡಬ, ಶ್ರೀನಾಥ್ ರೈ ಬಾಳಿಲ, ಸೋಮನಾಥ ಪೂಜಾರಿ, ಅಚ್ಚುತ ಗುತ್ತಿಗಾರು, ವಿಜಯ ಆಲಡ್ಕ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಗುರುದತ್ ಜಿ ನಾಯಕ್, ಅಶ್ರಫ್ ಕಾಸಿಲೆ, ಶಿವಪ್ರಸಾದ್ ನಡುತೋಟ, ಕರುಣಾಕರ ಅಡ್ಪಂಗಾಯ, ಎ.ಟಿ. ಕುಸುಮಾಧರ, ಚಂದ್ರಶೇಖರ ಕೇರ್ಪಳ, ಹರೀಶ್ ಬೂಡುಪನ್ನೆ, ಅಶೋಕ್ ಅಡ್ಕಾರ್, ರಾಜೇಶ್ ಮೇನಾಲ, ಶೇಖರ್ ಮಡ್ತಿಲ, ಬಾಲಕೃಷ್ಣ ರೈ ದುಗಲಡ್ಕ, ಚಂದ್ರಶೇಖರ ನೆಡಿಲು, ವಿನಯ ಮುಳುಗಾಡು ಸುನಿಲ್ ಕೇರ್ಪಳ, ಜಯಪ್ರಕಾಶ್ ಕುಂಚಡ್ಕ, ಕೃಪಾಶಂಕರ್ ತುದಿಯಡ್ಕ, ಕರುಣಾಕರ ಹಾಸ್ಪಾರೆ, ಶಿವಾನಂದ ಕುಕ್ಕುಂಬಳ, ಇಂದಿರಾ ಬಿ.ಕೆ., ಕಿಶೋರಿ ಶೇಟ್, ಶಶಿಕಲಾ ನೀರಬಿದಿರೆ, ಶೀಲಾ ಕುರುಂಜಿ, ಬೂಡು ರಾಧಾಕೃಷ್ಣ ರೈ, ಜಗದೀಶ ಸರಳಿಕುಂಜ , ಪ್ರಸಾದ್ ಕಾಟೂರು, ಸುಪ್ರೀತ್ ಮೋಂಟಡ್ಕ, ಮಹೇಶ್ ರೈ ಮೇನಾಲ, ಗೋಪಾಲ ನಡುಬೈಲು, ರಾಜೇಶ್ ಕಿರಿಭಾಗ, ಶ್ಯಾಮ್ ಪಾನತ್ತಿಲ, ಶಾಂತರಾಮ ಕಣಿಲೆಗುಂಡಿ, ಶ್ರೀಪತಿ ಭಟ್ ಮಜಿಗುಂಡಿ, ಬುದ್ದ ಜಿ ನಾಯ್ಕ್, ಶೀನಪ್ಪ ಬಯಂಬು, ಹೇಮಂತ್ ಮಠ ಮೊದಲಾದವರಿದ್ದರು.

ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ವಂದಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.