ಎ.26 ರಿಂದ ಮೇ.08 : ಮಿತ್ತೂರು ಉಳ್ಳಾಕ್ಲು ನಾಯರ್ ದೈವಗಳ ಕಾಲಾವಧಿ ಜಾತ್ರೋತ್ಸವ

0

ಸುಳ್ಯ ಸೀಮೆಯ ಉಬರಡ್ಕ ಮಿತ್ತೂರು ಗ್ರಾಮದ ಮಿತ್ತೂರು ಉಳ್ಳಾಕ್ಲು ನಾಯರ್ ದೈವಗಳ ಕಾಲಾವಧಿ ಜಾತ್ರೋತ್ಸವವು ಎ.26 ರಿಂದ ಮೇ .08 ರವರೆಗೆ ನಡೆಯಲಿರುವುದು.


ಎ.26 ರಂದು ಬೆಳಿಗ್ಗೆ ಗಂಟೆ 7.00 ಕ್ಕೆ ಮುಹೂರ್ತದ ಗೊನೆ ಕಡಿಯಲಾಗುವುದು.
ಮೇ.02 ರಂದು ಸಂಜೆ ಗಂಟೆ 5.00 ಕ್ಕೆ ಮಿತ್ತೂರು ಮೂಲ ಸನ್ನಿಧಿಯಿಂದ ಉಳ್ಳಾಗಳ ಭಂಡಾರ ಬಂದು ವಾಲಸಿರಿಯಲ್ಲಿ ದೇವರಿಗೆ ಸ್ವಸ್ತಿಕೆ,ಬಲ್ಲಾಳರ ಕಾಣಿಕೆ,ಅಡ್ತಲೆ ಕಿರುಚಾವಡಿಗೆ ಭಂಡಾರ ಬಂದು ಉಳ್ಳಾಗಳ ದರ್ಶನ,ಪ್ರಸಾದ ವಿತರಣೆ,ಸಂಕ್ರಾಂತಿ ಪೂಜೆ ನಡೆಯಲಿದೆ.
ಮೇ.03 ರಂದು ಸಂಜೆ 5.30 ಕ್ಕೆ ಮಿತ್ತೂರು ನಾಯರ್ ಭಂಡಾರ ಬಂದು ಬಂದ್ಯತ್ತ ವಾಲಸಿರಿ,ಮಿತ್ತೂರು ನಾಯರಿಗೆ ಕಿರೀಟವಾಗಿ ಅಡ್ತಲೆ ಕಿರುಚಾವಡಿಗೆ ಬರುವುದು,ಪ್ರಸಾದ ವಿತರಣೆ,ಸಂಕ್ರಾಂತಿ ಪೂಜೆ ನಡೆಯಲಿದೆ.


ಮೇ.07 ರಂದು ರಾತ್ರಿ ಗಂಟೆ 2.00 ಕ್ಕೆ ವಾಲಸಿರಿ,ಉಳ್ಳಾಗಳಿಗೆ ಸಿರಿಮುಡಿ ನಾಯರಿಗೆ ಕಿರೀಟವಾಗಿ ಪಡಂಪಾಳಿ ಮಾಳಿಗೆಗೆ ಭಂಡಾರ ಬರುವುದು,ಉಳ್ಳಾಗಳ ದರ್ಶನ,ಪ್ರಸಾದ ವಿತರಣೆ ನಡೆಯಲಿದೆ.
ಮೇ.08 ರಂದು ಬೆಳಿಗ್ಗೆ ಗಂಟೆ 8.00 ಕ್ಕೆ ನಾಯರ್ ನೇಮ, ಮೇಲ್ಮಂಚಕ್ಕೆ ಕಾಯಿ ಒಡೆಯುವುದು,ದೂಳುಕಾಯಿ, ಅಂಬುಕಾಯಿ,ಸ್ನಾನ ,ಅಪರಾಹ್ನ 1.00 ಗಂಟೆಗೆ ಚಾಕಟೆ ಅಡಿಯಲ್ಲಿ ಬಟ್ಟಲು ಕಾಣಿಕೆ,ಪ್ರಸಾದ ವಿತರಣೆ ,ಹರಕೆ,ಪೀಡೆ ಬಿಡಿಸಿವುದು,ತೊಡಕ – ಮಡಕ ನಡೆಯಲಿದೆ.


ಮೇ.12 ರಂದು ರಾತ್ರಿ ಗಂಟೆ 9.00 ಕ್ಕೆ ನಡಕಾನಕೊಚ್ಚಿ ಮಾಳಿಗೆಯಲ್ಲಿ ರಾಜಂದೈವಕ್ಕೆ ಕೂಡುವುದು.ಉಪದೈವಗಳ ಕೋಲ ನಡೆಯಲಿದೆ.
ಮೇ .13 ರಂದು ಹಗಲು ಗಂಟೆ 11.00 ಕ್ಕೆ ಮಾರಿಕಳಕ್ಕೆ,ಆಮೇಲೆ ಮುಳಿ ನಡೆಯಲಿದೆ.