ಬಿಸಿಲಿನ ಕಾವಿಗೆ ಮರಕತ ದೇವಸ್ಥಾನದ ಮೀನುಗಳ ಸಾವು
ಬಿಸಿಲಿನ ತೀವ್ರತೆಯಿಂದ ದಿನೇ ದಿನೇ ತಾಪಮಾನ ಹೆಚ್ಚಾಗುತ್ತಿದ್ದು, ಬಿಸಿಲ ಝಳದಿಂದ ರಕ್ಷಿಸಿಕೊಳ್ಳಲು ಎಲ್ಲರೂ ಪರದಾಡುವಂತಾಗಿದೆ.
ಇದೀಗ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿದ ಹೊಳೆಯಲಗಲಿ ಸಾವಿರಾರು ಮೀನುಗಳು ಸತ್ತಿರುವುದಾಗಿ ವರದಿಯಾಗಿದೆ.
ಬಿಸಿಲಿನ ಕಾವು ಹಾಗೂ ನೀರಿನಲ್ಲಿ ಆಮ್ಲಜನಕ ಕೊರತೆ ಉಂಟಾಗಿ ಮೀನುಗಳು ಸತ್ತಿರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಸತ್ತಿರುವ ಮೀನುಗಳನ್ನು ನದಿ ದಡದಲ್ಲಿ ಹೊಂಡ ತೆಗದು ಹೂಳಲಾಗುತ್ತಿದೆ.