ಹಿರಿಯ ಚಿಂತಕ, ಸಾಮಾಜಿಕ ಹೋರಾಟಗಾರ, ಪ್ರಖ್ಯಾತ ವಾಗ್ಮಿ ಲಕ್ಷ್ಮೀಶ ಗಬ್ಲಡ್ಕ ಕಾಂಗ್ರೆಸ್ ಸೇರ್ಪಡೆ

0

ಹಿರಿಯ ಚಿಂತಕ, ಸಾಮಾಜಿಕ ಹೋರಾಟಗಾರ, ಪ್ರಖ್ಯಾತ ವಾಗ್ಮಿ ಗುತ್ತಿಗಾರಿನ ಲಕ್ಷ್ಮೀಶ ಗಬ್ಲಡ್ಕ ಇವರು ಇಂದು ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷಕ್ಕೆ ಸೇರಿಕೊಂಡರು.
ಇವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಜಿಲ್ಲಾ ಪ್ರಚಾರ ಸಮಿತಿ ಸಂಯೋಜಕ ರಾಜಾರಾಮ್ ಭಟ್ ಬೆಟ್ಟ ಇವರ ಸಮ್ಮುಖದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಯ ವಕ್ತಾರ ಚರಣ್ ಜಿತ್ ಸಿಂಗ್ ಸಪ್ರಾ ಇವರು ಪಕ್ಷಕ್ಕೆ ಸೇರ್ಪಡೆ ಮಾಡಿದರು.