ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ನರಸಿಂಹ ಜಯಂತೀ ಮಹೋತ್ಸವ

0

ಇಂದು ಬೆಳಗ್ಗೆ ಶ್ರೀ ನರಸಿಂಹ ದೇವರಿಗೆ ಮಹಾಭಿಷೇಕ, ನಾಳೆ ಮಹಾರಥೋತ್ಸವ

ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ಇದರ ಶ್ರೀ ನರಸಿಂಹ ಜಯಂತೀ ಮಹೋತ್ಸವದ ಕಾರ್ಯಕ್ರಮ ನಡೆಯುತಿದ್ದು ಮೇ.4 ರ ಬೆಳಗ್ಗೆ ಡಾ. ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನರಸಿಂಹ ಜಯಂತಿ ಪ್ರಯುಕ್ತ ಶ್ರೀ ನರಸಿಂಹ ದೇವರಿಗೆ ಮಹಾಭಿಷೇಕ ನೆರವೇರಿತು.

ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಉಪಸ್ಥಿತಿಯಲ್ಲಿ ನೆರವೇರಿತು. ಮಹಾಭಿಷೇಕ ಮುಕ್ತಾಯದ ಬಳಿಕ ಯಜ್ಞೇಶ್ ಆಚಾರ್ಯ ಅವರಿಂದ “ಭಕ್ತಿ ಸಂಗೀತ” ಕಾರ್ಯಕ್ರಮ ನಡೆಯಿತು‌‌.

ಇಂದು ಸಂಜೆ ನೃತ್ಯಾಂಜಲಿ ಕಾರ್ಯಕ್ರಮ ನಡೆಯಲಿದ್ದು ರಾತ್ರಿ ಹೊರಾಂಗಣ ಮತ್ತು ರಾಜ ಬೀದಿ ವಿಮಾನೋತ್ಸವ, ವಸಂತ ಪೂಜೆ, ಡೋಲೋತ್ಸವ ನಡೆಯಲಿದೆ. ಮೇ.5 ರ ಬೆಳಗ್ಗೆ ಮಹಾರಥೋತ್ಸವ ನಡೆಯಲಿದೆ.