ಶಿವಳ್ಳಿ ಸಂಘದ ವತಿಯಿಂದ ನಡೆದ ವೇದ ಶಿಬಿರದ ಸಮಾರೋಪ

0

ಸುಳ್ಯ ತಾಲೂಕು ಶಿವಳ್ಳಿ ಸಂಘದ ವತಿಯಿಂದ
ಕಳೆದ 20 ದಿನಗಳಿಂದ ನಡೆದ ವೇದ ಶಿಬಿರದ ಸಮಾರೋಪ ಸಮಾರಂಭವು ಮೇ.4 ರಂದು ಸುಳ್ಯ ಶ್ರೀ ಗುರು ರಾಘವೇಂದ್ರ ಮಠದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ರಮೇಶ್ ಕುಮಾರ್ ಆರ್ ಕೆ. ವಹಿಸಿದ್ದರು. ಅತಿಥಿಗಳಾಗಿ ಬೃಂದಾವನ ಸೇವಾ ಟ್ರಸ್ಟಿನ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ಮಾತಾನಾಡಿ “ಮಕ್ಕಳು ಶಿಬಿರದ ಮುಖಾಂತರ ಕಲಿತ ವೇದ ಮಂತ್ರವನ್ನು ನಿರಂತರವಾಗಿ ಮುಂದುವರಿಸಿಕೊಂಡು ಪವಿತ್ರವಾದ ಬ್ರಾಹ್ಮಣತ್ವವನ್ನು ಜೀವನದಲ್ಲಿ ಉಳಿಸಿಕೊಳ್ಳುವಂತೆ ಕರೆ ನೀಡಿದರು.


ನಿವೃತ್ತ ಪ್ರಾಂಶುಪಾಲ ಗೋಪಾಲ್ ರಾವ್, ವೇದ ಗುರುಗಳಾದ ಶ್ರೀಹರಿ ಯವರು ವಿದ್ಯಾರ್ಥಿಗಳಿಗೆ ಆಶೀರ್ವದಿಸಿದರು. ಹಿರಿಯರಾದ ನಾರಾಯಣ ಶಬರೂರಾಯ ಉಪಸ್ಥಿತರಿದ್ದರು. ಗಿರೀಶ್ ಕೇಕುಣ್ಣಾಯ ಸ್ವಾಗತಿಸಿದರು. ರಾಮ್ ಕುಮಾರ್ ಹೆಬ್ಬಾರ ವಂದಿಸಿದರು.