ಬಾಳುಗೋಡು ಬೆಟ್ಟುಮಕ್ಕಿ ಶ್ರೀ ಶಿರಾಡಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ

0

ಶ್ರೀ ಶಿರಾಡಿ ದೈವಸ್ಥಾನ ಬೆಟ್ಟುಮಕ್ಕಿ ಬಾಳುಗೋಡು ಇದರ ವಾರ್ಷಿಕ ನೇಮೋತ್ಸವ ಮೇ.2 – ಮೇ.3 ರಂದು ನಡೆಯಿತು.

ಮೇ. 2 ರಂದು ಗ್ರಾಮಸ್ಥರು ಬೆಟ್ಟುಮಕ್ಕಿಯಲ್ಲಿ ಸೇರಿ ಭಂಡಾರ ಹಿಡಿದು ಶಿರಾಡಿ ಬದಿ ಕಾಂಚಾರಕ್ಕೆ ಹೋಗಿ ತಂಬಿಲಾಧಿ ಸೇವೆ ನಡೆಸಿದರು. ಅಲ್ಲಿಂದ ಸಂಜೆ ಮೆರವಣಿಗೆಯಲ್ಲಿ ಬೆಟ್ಟುಮಕ್ಕಿಗೆ ಭಂಡಾರ ತರಲಾಯಿತು. ಸಂಜೆ ಊರ ಪರವೂರ ಭಜನಾ ತಂಡದಿಂದ ಆಕರ್ಷಕ ಕುಣಿತ ಭಜನಾ ಕಾರ್ಯಕ್ರಮ ನಡೆದು, ರಾತ್ರಿ ಶಾರದಾ ಆರ್ಟ್ಸ್ ಕಲಾವಿದೆರ್ ಮಂಜೇಶ್ವರ ಇವರಿಂದ “ಯಾನ್ ಉಲ್ಲೆತ್ತಾ” ಎಂಬ ತುಳು ನಾಟಕ ಪ್ರದರ್ಶನಗೊಂಡಿತು. ಮೇ.3 ರ ಬೆಳಗ್ಗೆ ಶ್ರೀ ಶ್ರೀರಾಡಿ ದೈವದ ಹಾಗೂ ಸಹ ಪರಿವಾರ ದೈವಗಳಾದ ಬ್ರಹ್ಮರು, ನುಗ್ಗೆ ಮಾದಿಮಾಳ್, ಮಣಿಗೋವಿಂದ, ಗಿಳಿರಾಮ, ಪೊಟ್ಟ, ಮೊರಾಂದಾಯ, ಪುರುಷ, ಕರಿನಾಯಕ, ಬೇಡವ, ಬಚ್ಚನಾಯಕ, ಮಣಿಪಂತ ಪಂಜುರ್ಲಿ, ಕಲ್ಲುರ್ಟಿ, ಕಲ್ಕುಡ, ಅಡಿಮಂತಾಯ ಹಾಗೂ ಗುಳಿಗ ದೈವಗಳ ವಾರ್ಷಿಕ ನೋಮೋತ್ಸವ ಜರಗಿತು. ದೈವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಊರವರು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು