ಹರಿಹರ ಪಲ್ಲತಡ್ಕ: ಕಮಲ ಎ. ಆರ್. ರವರಿಗೆ ಬೀಳ್ಕೊಡುಗೆ

0

ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಹಿರಿಯ ಗುಮಾಸ್ತೆಯಾಗಿದ್ದು ಇಂದು ಇಂದು ಸೇವಾ ನಿವೃತ್ತಿ ಹೊಂದಿದ ಕಮಲಾ ಎ.ಆರ್ ಅವರನ್ನು ಇಂದು ಸೊಸೈಟಿ ವತಿಯಿಂದ ಬೀಳ್ಕೊಡಲಾಯಿತು. ಶಾಲು, ಹಾರ, ಸ್ಮರಣೆ, ಫಲಪುಷ್ಪ ನೀಡಿ ಗೌರವಿಸಲಾಯಿತು.

ಈ ಸಂದರ್ಭ ಸೊಸೈಟಿಯ ಅಧ್ಯಕ್ಷ ಹರ್ಷ ಕುಮಾರ್ ದೇವಜನ, ಉಪಾಧ್ಯಕ್ಷ ಶೇಖರ ಅಂಬೆ ಕಲ್ಲು, ನಿರ್ದೇಶಕರುಗಳಾದ ವಿನೂಪ್ ಮಲ್ಲಾರ, ಮಣಿಕಂಠ ಕೊಳಗೆ, ತಾರನಾಥ ಮುಂಡಾಜೆ, ಶ್ರೀಮತಿ ವಿಜಯ ಕಜ್ಜೋಡಿ, ಶ್ರೀಮತಿ ವಿಜಯ ಕೂಜುಗೋಡು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ ಮನೆ, ಸಹಾಯಕ ‌ಕಾರ್ಯನಿರ್ವಹಣಾಧಿಕಾರಿ ಹೂವಪ್ಪ ಗೌಡ, ಸಿಬ್ಬಂದಿಗಳು, ಸದಸ್ಯರು, ಮಾಜಿ ಮ್ಯಾನೇಜರ್ ಶೇಷಪ್ಪ ಗೌಡ,ಆಂತರಿಕ ಲೆಕ್ಕ ಪರಿಶೋಧಕ ಜನಾರ್ದನ ಗುಂಡಿಹಿತ್ಲು, ನವೋದಯ ಪ್ರೇರಕಿ ಚಂದ್ರಕಲಾ ಕಟ್ರಮನೆ ಮತ್ತಿತರರು ಉಪಸ್ಥಿತಿತರಿದ್ದರು.