ಮಾಣಿ – ಮೈಸೂರು ಹೆದ್ದಾರಿ ಕುಂಬರ್ಚೋಡು ಬಳಿ ಅಪಾಯಕಾರಿ ಮರ

0

ಮರದ ಬುಡದಿಂದ ಮಣ್ಣು ಜರಿದು ಇಂದೋ ನಾಳೆಯೋ ಬೀಳುವ ಸ್ಥಿತಿ

ಮಾಣಿ ಮೈಸೂರು ಹೆದ್ದಾರಿ ಕುಂಬರ್ಚೋಡು ಬಳಿ ಬೃಹತ್ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿ ನಿಂತಿದೆ. ಹೆದ್ದಾರಿಗೆ ತಾಗಿಕ್ಕೊಂಡಿರುವ ಮಣ್ಣಿನ ದಿಡ್ಡಿನ ಮೇಲೆ ಈ ಮರ ನಿಂತಿದ್ದು ಮರದ ಬುಡದಿಂದಲೇ ಮಣ್ಣುಗಳು ಕುಸಿದು ಅಪಾಯದ ಮುನ್ಸೂಚನೆ ನೀಡುತ್ತಿದೆ.


ಇದಕ್ಕೆ ಸಂಬಂಧಿಸಿದಂತೆ ಸ್ಥಳಿಯರು ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರು ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಿರುವ ಬಗ್ಗೆಯೂ ತಿಳಿದು ಬಂದಿದೆ.
ಮಾಣಿ ಮೈಸೂರು ಹೆದ್ದಾರಿಯಾದ ಹಿನ್ನೆಲೆಯಲ್ಲಿ ನೂರಾರು ವಾಹನಗಳು ಓಡಾಡುತ್ತಿರುತ್ತದೆ. ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.