ಬಿಳಿನೆಲೆ: ಅಗ್ನಿಶಾಮಕ ದಳದವರಿಂದ ಬೆಂಕಿ ಆರಿಸುವ ಪ್ರಾತ್ಯಕ್ಷಿಕೆ

0

ದ.ಕ ಜಿಲ್ಲಾ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖ, ಶ್ರೀ ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ ಯ ಆಶ್ರಯದಲ್ಲಿ ನಡೆಸಲ್ಪಡುವ ಶ್ರೀಗೋಪಾಲಕೃಷ್ಣ ಪ್ರೌಢ ಶಾಲೆ ಬಿಳಿನೆಲೆ ಮತ್ತು ಶ್ರೀ ವೇದವ್ಯಾಸ ವಿದ್ಯಾಲಯ ಬಿಳಿನೆಲೆ ಯ ವಿದ್ಯಾರ್ಥಿಗಳಿಗೆ ತುರ್ತು ಸ್ಥಿತಿಗಳಲ್ಲಿ ಬೆಂಕಿ ಆರಿಸುವ ವಿಧಾನದ ಪ್ರಾತ್ಯಕ್ಷಿಕೆಯನ್ನು ಬಿಳಿನೆಲೆ ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ಜೂ. 24 ರಂದು ನಡೆಸಿದರು.

ಶಾಲಾ ಸಂಚಾಲಕರಾದ ಸುದರ್ಶನ ಜೋಯಿಸ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿಗಳಾದ ಶ್ರೀಕೃಷ್ಣ ಶರ್ಮ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸತ್ಯಶಂಕರ ಸ್ವಾಗತಿಸಿದರು.


ಜಿಲ್ಲಾ ಅಗ್ನಿಶಾಮಕ ದಳದ ಮುಖ್ಯಸ್ಥರಾದ ಭರತಕುಮಾರ್ ಬೆಂಕಿ ಆರಿಸು ವ ಕುರಿತು ತರಬೇತಿ ನೀಡಿದರು.
ಭರತ್ ಕುಮಾರ್ ಮತ್ತು ಅವರ ಸಿಬ್ಬಂದಿಗಳನ್ನು ಶಾಲಾ ಸಂಚಾಲಕರು ಸಮ್ಮಾನಿಸಿ ಗೌರವಿಸಿದರು.


ವೇದವ್ಯಾಸ ವಿದ್ಯಾಲಯದ ಮುಖ್ಯಸ್ಥರಾದ ಪ್ರಶಾಂತ.ಬಿ. ವಂದಿಸಿದರು,ಗಣೇಶ್ ಕಾಶಿಕಟ್ಟೆ ಸಹಕರಿಸಿದರು.