ಕಳಂಜ: ಮಣಿಮಜಲು ಸಂಪರ್ಕ ಸೇತುವೆಯನ್ನು ಸಂಪರ್ಕಕ್ಕೆ ಮುಕ್ತಗೊಳಿಸದಿದ್ದರೆ ಫಲಾನುಭವಿಗಳಿಂದ ಪ್ರತಿಭಟನೆಯ ಎಚ್ಚರಿಕೆ

0

ಕಳಂಜ ಗ್ರಾಮದ ಮಣಿಮಜಲು ಭಾಗವನ್ನು ಸಂಪರ್ಕಿಸಲು ಬೆಳ್ಳಾರೆ ಅಯ್ಯನಕಟ್ಟೆ ಮುಖ್ಯ ರಸ್ತೆಯ ಜಯಪ್ರಕಾಶ್ ಪಂಜಿಗಾರು ಎಂಬವರ ಮನೆಯ ಸಮೀಪ ನಿರ್ಮಿಸಿರುವ ನೂತನ ಸಂಪರ್ಕ ಸೇತುವೆಯ ಕಾಮಗಾರಿ ಪೂರ್ಣಗೊಂಡಿದ್ದರೂ, ಸಂಪರ್ಕಕ್ಕೆ ಮುಕ್ತಗೊಳಿಸದಿರುವುದನ್ನು ಖಂಡಿಸಿ ಜೂ. 28ರಂದು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಮಣಿಮಜಲು ಭಾಗದ ಫಲಾನುಭವಿಗಳು ಪಂಚಾಯತ್ ಗೆ ನೀಡಿದ್ದಾರೆ.


ಈ ಬಗ್ಗೆ ಫಲಾನುಭವಿಗಳಾದ ಎಂ. ಅಬ್ದುಲ್ ಜಮಾಲ್, ಎಂ. ಎಲ್ಯಣ್ಣ, ಎಂ. ಹರಿಯಪ್ಪ, ಸಂತೋಷ್ ಎ, ಡಿಕೇಶ್ ಕುಮಾರ್ ಸಹಿ ಸಂಗ್ರಹಿಸಿ ಕಳಂಜ ಗ್ರಾ.ಪಂ.ಗೆ ಮತ್ತು ಬೆಳ್ಳಾರೆ ಪೊಲೀಸ್ ಠಾಣೆಗೆ ಮನವಿ ನೀಡಿದ್ದಾರೆ.

ಗ್ರಾ.ಪಂ.ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮಯ್ಯ, ಅಧ್ಯಕ್ಷ ಪ್ರಶಾಂತ್ ಕುಮಾರ್ ಕಿಲಂಗೋಡಿ ಮನವಿ ಸ್ವೀಕರಿಸಿದರು.