ಜು.3: ನಾಡ ಮಾವು, ಹಲಸು ಸಂರಕ್ಷಣೆ ಮತ್ತು ಕಸಿಕಟ್ಟುವ ತರಬೇತಿ ಕಾರ್ಯಾಗಾರ

0

ತೋಟಗಾರಿಕೆ ಇಲಾಖೆ ಸುಳ್ಯ, ಸುಳ್ಯ ರೈತ ಉತ್ಪಾದಕರ ಕಂಪೆನಿ ನಿಯಮಿತ, ನಾಡ ಮಾವು ಮತ್ತು ಹಲಸು ಸಂರಕ್ಷಣಾ ಬಳಗ ದ.ಕ. ಮತ್ತು ಉಡುಪಿ ಜಿಲ್ಲೆಯ ವತಿಯಿಂದ ನಾಡ ಮಾವು, ಹಲಸು ಸಂರಕ್ಷಣೆ ಮತ್ತು ಕಸಿಕಟ್ಟುವ ತರಬೇತಿ ಕಾರ್ಯಾಗಾರ ಜು.3 ರಂದು ಬೆಳಿಗ್ಗೆ 10 ಗಂಟೆಗೆ ಸುಳ್ಯದ ಎಪಿಎಂಸಿ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೆಶಕಾರದ ಕೆ.ಎಂ.ರಮೇಶ್ ನೆರವೇರಿಸಲಿದ್ದಾರೆ.

ಅಧ್ಯಕ್ಷತೆಯನ್ನು ಸುಳ್ಯ ರೈತ ಉತ್ಪಾದಕರ ಕಂಪೆನಿ ನಿಯಮಿತ ಇದರ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಾಗಿ ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ನವೀನ್ ಕುಮಾರ್ ಎಂ.ಎನ್. ಆಗಮಿಸಲಿದ್ದಾರೆ. ತಳಿ ಸಂರಕ್ಷಣೆಯ ಕುರಿತು ಮಾಹಿತಿ ನೀಡಲು ಅಡಿಕೆ ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀಪಡ್ರೆ, ಕಸಿ ತರಬೇತಿ ಕುರಿತು ಮಾಹಿತಿ ನೀಡಲು ಶ್ಯಾಮ್ ಭಟ್ ಕಲ್ಮಡ್ಕ ಗೊರ್ಗೊಡಿ, ಗುತ್ತಿಗಾರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ.