ಜಾಲ್ಸೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಾರ್ಷಿಕ ಮಹಾಸಭೆ

0

ನೂತನ ಪದಾಧಿಕಾರಿಗಳ ಆಯ್ಕೆ

ಜಾಲ್ಸೂರಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವಾರ್ಷಿಕ ಮಹಾಸಭೆಯು ಶ್ರೀ ಗುರುರಾಘವೇಂದ್ರ ಸಭಾಭವನದಲ್ಲಿ ಜು.2ರಂದು ಜರುಗಿತು.
ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ್ ಬೇರ್ಪಡ್ಕ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ವಿನಯ್ ಜಾಲ್ಸೂರು ಅವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.


ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಜಗದೀಶ್ ಬೇರ್ಪಡ್ಕ, ನೂತನ ಅಧ್ಯಕ್ಷರಾಗಿ ನಿಶಾಂತ್ ಮೋಂಟಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಧರ್ಮಪಾಲ ಕೆಮನಬಳ್ಳಿ, ಕೋಶಾಧಿಕಾರಿಯಾಗಿ ವಿನಯ್ ಜಾಲ್ಸೂರು, ಜೊತೆ ಕಾರ್ಯದರ್ಶಿಯಾಗಿ ಜಯರಾಮ ಕದಿಕಡ್ಕ ಆಯ್ಕೆಯಾದರು.


ಗಣೇಶೋತ್ಸವದ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಜಯರಾಮ ರೈ ಜಾಲ್ಸೂರು, ಮಾಧವ ಗೌಡ ಕಾಳಮನೆ, ವಿಷ್ಣುಭಟ್ ಪೆರಂಬಾರು, ಬಾಬು ಪಾಟಾಳಿ ಅರಿಯಡ್ಕ, ತಿಮ್ಮಯ್ಯ ಆಚಾರ್ಯ ಜಾಲ್ಸೂರು, ಪರಮೇಶ್ವರ ಕುಂದ್ರುಕೋಡಿ, ಎನ್.ಎಂ. ಸತೀಶ್ ಕೆಮನಬಳ್ಳಿ, ಮಾದವ ಗೌಡ ದೇವಿಕ ಜಾಲ್ಸೂರು, ಆತ್ಮಾನಂದ ಗಬ್ಬಲಡ್ಕ, ಕಮಲಾಕ್ಷ ನಂಗಾರು, ಶೇಖರ ಕಾಳಮನೆ, ಪಿ.ಆರ್. ಸಂದೀಪ್ ಕದಿಕಡ್ಕ, ಮೋಹನ ನಂಗಾರು, ಕೆ.ಎಂ. ಬಾಬು ಕದಿಕಡ್ಕ, ಬಾಲಕೃಷ್ಣ ಮಣಿಯಾಣಿ ಮರಸಂಕ, ಪಿ.ಆರ್. ಸ್ವರೂಪ್ ಕದಿಕಡ್ಕ, ಡಾ. ಹರಿಪ್ರಸಾದ್ ಕುದ್ಕುಳಿ, ನಂದಕಿಶೋರ್ ಭಟ್ ಬನಾರಿ, ಶ್ಯಾಮ್ ಕುಮಾರ್ ಮರಸಂಕ, ಶಿವಪ್ಪ ಕಜೆಗದ್ದೆ, ಗಿರೀಶ್ ಮರಸಂಕ, ಶ್ರೀವತ್ಸ ಕಾಟೂರು, ಧನರಾಜ್ ಕದಿಕಡ್ಕ, ಪ್ರಶಾಂತ್ ಮೋಂಟಡ್ಕ, ಶ್ರೀಮತಿ ಈಶ್ವರಿ ಭಟ್ ಪೆರಂಬಾರು, ಶ್ರೀಮತಿ ಸರಸ್ವತಿ ಮರಸಂಕ, ಶ್ರೀಮತಿ ಗಿರಿಜ ಕುಂದ್ರಕೋಡಿ, ಶ್ರೀಮತಿ ಶೀಲಾವತಿ ಮಹಾಬಲಡ್ಕ, ಶ್ರೀಮತಿ ಸುಜಾತ ಭಟ್ ಬೇರ್ಪಡ್ಕ, ಶ್ರೀಮತಿ ಕುಸುಮ ಬೇರ್ಪಡ್ಕ, ಶ್ರೀಮತಿ ಶಶಿಕಲಾ ಬೇರ್ಪಡ್ಕ, ಸತೀಶ ಮರಸಂಕ, ಮೋಹನ ಜಾಲ್ಸೂರು, ಶೇಷಪ್ಪ ನಾಯ್ಕ ಕಜೆಗದ್ದೆ, ನವೀನ ಜಬಳೆ, ಶ್ಯಾಮ್ ನಂಗಾರು, ಶ್ರೀಮತಿ ವಸಂತಿ ಕಾಳಮನೆ, ಶ್ರೀಮತಿ ಭಾರತಿ ಕಜೆಗದ್ದೆ, ಶ್ರೀಮತಿ ಭವ್ಯ ಕದಿಕಡ್ಕ, ಶ್ರೀಮತಿ ಬೇಬಿ ಪ್ರತಿಮಾ ಶೇಷನಡ್ಕ, ಶ್ರೀಮತಿ ರಾಧಾ ಶೇಷನಡ್ಕ, ಶ್ರೀಮತಿ ಮೋಹಿನಿ ಜಾಲ್ಸೂರು, ದಾಮೋದರ ಮಹಾಬಲಡ್ಕ, ಗೋಪಾಲ ಮಹಾಬಲಡ್ಕ, ಮುರಳೀಧರನ್ ಕೆಮನಬಳ್ಳಿ, ಜಗದೀಶ ಕೆಮನಬಳ್ಳಿ, ಭಾಸ್ಕರ ಕಜೆಗದ್ದೆ, ದಿನೇಶ್ ಬದಿಯಡ್ಕ, ಅಶೋಕ ಬದಿಯಡ್ಕ, ಬ್ರಿಜೇಶ್ ಮರಸಂಕ, ವಿಕಾಸ್ ಮರಸಂಕ, ರೋಷನ್ ಜಾಲ್ಸೂರು, ಗುಡ್ಡಪ್ಪ ಕ್ಯಾಂಪ್ಕೋ, ಅವರನ್ನು ಆಯ್ಕೆ ಮಾಡಲಾಯಿತು.