ಹಿಟ್ ಆ್ಯಂಡ್ ರನ್

0

ಬೈಕ್ ಗೆ ಗುದ್ದಿದ ಟಿಪ್ಪರ್ ಪರಾರಿ : ಯುವಕನ ಕಾಲಿಗೆ ಗಂಭೀರ ಗಾಯ

ಬೈಕ್ ಗೆ ಟಿಪ್ಪರ್ ಲಾರಿ ಢಿಕ್ಕಿಯಾಗಿ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯವಾದ ಘಟನೆ ಆಲೆಟ್ಟಿ ಮುಖ್ಯ ರಸ್ತೆಯ ಮಿತ್ತಡ್ಕ ಎಂಬಲ್ಲಿ ಇಂದು ಸಂಭವಿಸಿದೆ.

ಡಿಕ್ಕಿ ಹೊಡೆದ ಟಿಪ್ಪರ್ ಚಾಲಕ ನಿಲ್ಲಿಸದೇ ಮುಂದಕ್ಕೆ ಹೋಗಿ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.

ಆಲೆಟ್ಟಿಯ ಮುಖ್ಯ ರಸ್ತೆಯ ಮಿತ್ತಡ್ಕ ಕೆ.ಎಫ್. ಡಿ.ಸಿ ಐ.ಬಿ ಬಳಿ ಈ ಘಟನೆ ಸಂಭವಿಸಿದ್ದು ಕಲ್ಲಪಳ್ಳಿಯ ಪ್ರದೀಪ್ (ಹರಿ) ಎಂಬ ಯುವಕನ ಕಾಲಿಗೆ ಗಂಭೀರ ಗಾಯವಾಗಿದೆ.

ಪ್ರದೀಪ್ ರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸ್ಥಳೀಯರಾದ ಯಶವಂತ ಆಲೆಟ್ಟಿ ಯವರು ತಮ್ಮ ‌ವಾಹನದಲ್ಲಿ ಕರೆತಂದು ದಾಖಲಿಸಿದರು. ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.