ಕಡ್ಲಾರು: ಗುರು ಅಷ್ಟೋತ್ತರ ಅರ್ಚನೆ ಮತ್ತು ಭಗವದ್ಗೀತಾ ಪಾರಾಯಣ

0

ದೇವಚಳ್ಳ ಗ್ರಾಮದ ವಾಲ್ತಾಜೆಯ ಕಡ್ಲಾರು ಜನಾರ್ಧನ ಆಚಾರ್ಯರ ಮನೆಯಲ್ಲಿ ಭಗವದ್ಗೀತಾ ಪಾರಾಯಣ ಮತ್ತು ಗುರು ಅಷ್ಟೋತ್ತರ ಅರ್ಚನೆ ಕಾರ್ಯಕ್ರಮವು ನಡೆಯಿತು.

ಕಡ್ಲಾರು ಜನಾರ್ಧನ ಆಚಾರ್ಯ ಮತ್ತು ಶ್ರೀಮತಿ ಲಲಿತಾ ಜನಾರ್ಧನ ಆಚಾರ್ಯರ ಪುತ್ರಿ ಶ್ರೀಮತಿ ಭವ್ಯರ ಸೀಮಂತಾ ಕಾರ್ಯಕ್ರಮದ ಸುಸಂದರ್ಭದಲ್ಲಿ ಬಾಳಿಲದ ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಮತ್ತು ತಂಡದ ಮೂಲಕ ಗುರು ಅಷ್ಟೋತ್ತರ ಅರ್ಚನೆ ಮತ್ತು ಭಗವದ್ಗೀತಾ ಪಾರಾಯಣ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕಡ್ಲಾರು ಮನೆಯ ಕುಟುಂಬಸ್ಥರು ಮತ್ತು ಊರ ಪರ ಊರ ಬಂಧು ಮಿತ್ರರು ಉಪಸ್ಥಿತರಿದ್ದರು.