ಕನಕಮಜಲು : ಚಿನ್ನಾಭರಣ ಕಳವು ಪ್ರಕರಣ

0

ಘಟನಾ ಸ್ಥಳಕ್ಕೆ ಮಂಗಳೂರು ಎಡಿಷನಲ್ ಎಸ್ಪಿ ಭೇಟಿ- ದರೋಡೆಕೋರರ ಶೀಘ್ರ ಬಂಧನಕ್ಕೆ ಕ್ರಮದ ಭರವಸೆ

ಕನಕಮಜಲು ಗ್ರಾಮದ ಬುಡ್ಲೆಗುತ್ತು ಯುರೇಶ್ ಅವರ ಮನೆಯಲ್ಲಿ ಚಿನ್ನಾಭರಣ ಕಳವು ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಸಿಕೊಂಡಿದ್ದು , ಸಂಜೆ ಘಟನಾ ಸ್ಥಳಕ್ಕೆ ಮಂಗಳೂರಿನಿಂದ ಎಡಿಷನಲ್ ಎಸ್ಪಿ ಧರ್ಮಪ್ಪ, ಸುಳ್ಯ ಪೊಲೀಸ್ ಠಾಣೆಯ ಕ್ರೈಮ್ ಎಸ್.ಐ. ಸರಸ್ವತಿ ಹಾಗೂ ಪೊಲೀಸರ ತಂಡ ಭೇಟಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದು , ದರೋಡೆಕೋರರ ಬಂಧನಕ್ಕೆ ಶೀಘ್ರವಾಗಿ ಕ್ರಮ ಕೈಗೊಳ್ಳತ್ತೇವೆ. ಈಗಾಗಲೇ ಎಲ್ಲಾ ಹಂತಗಳಿಂದಲೂ ತನಿಖೆ ಪ್ರಾರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.