ಅಡ್ಕಾರು: ಅಂಜನಾದ್ರಿ ಆಂಜನೇಯನ ಕ್ಷೇತ್ರದಲ್ಲಿ ಆಟಿ ಅಮವಾಸ್ಯೆ ಆಚರಣೆ

0

ಕಲಶಸ್ನಾನ, ವೃಕ್ಷಾರೋಪಣ ಹಾಲೆ ಕಷಾಯ ವಿತರಣೆ

ಜಾಲ್ಸೂರು ಗ್ರಾಮದ ಅಡ್ಕಾರಿನ ಅಂಜನಾದ್ರಿಯ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದಲ್ಲಿ ಜು.17ರಂದು ಆಟಿ ಅಮವಾಸ್ಯೆ ಪ್ರಯುಕ್ತ ಕಲಶಸ್ನಾನ, ವೃಕ್ಷಾರೋಪಣ ಹಾಗೂ ಹಾಲೆ ಕಷಾಯವನ್ನು ವಿತರಿಸಲಾಯಿತು.

ಬ್ರಹ್ಮಶ್ರೀ ವೇ.ಮೂ. ಪುರೋಹಿತ ನಾಗರಾಜ ಭಟ್ ಅವರ ನೇತೃತ್ವದಲ್ಲಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿಗೆ ವಿಶೇಷ ಪೂಜೆ ಜರುಗಿತು. ಈ ಸಂದರ್ಭದಲ್ಲಿ ಭಕ್ತಾದಿಗಳಿಗೆ ಕಲಶ ಸ್ನಾನ, ವೃಕ್ಷಾರೋಪಣ, ಹಾಲೆ ಮರದ ಕಷಾಯವನ್ನು ವಿತರಿಸಲಾಯಿತು.


ಅಂಜನಾದ್ರಿ ಕ್ಷೇತ್ರದ ವಠಾರದಲ್ಲಿ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜಯರಾಮ ರೈ ಜಾಲ್ಸೂರು ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಆಂಜನೇಯ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಶಿವರಾಮ ರೈ ಕುರಿಯಗುತ್ತು ದಂಪತಿಗಳು, ಪದಾಧಿಕಾರಿಗಳಾದ ವಿವೇಕ್ ರೈ ಡಿಂಬ್ರಿಗುತ್ತು, ರವಿಪ್ರಸಾದ್ ಕಜೆಗದ್ದೆ, ಜಯಂತ ಗೌಡ ಅಡ್ಕಾರು, ಶಿವಪ್ರಸಾದ್ ಅಡ್ಕಾರು, ಸುನಿಲ್ ಅಡ್ಕಾರು, ಜಾಲ್ಸೂರು ಶ್ರೀ ಗುರುರಾಘವೇಂದ್ರ ಭಜನಾ ಮಂದಿರದ ಸದಸ್ಯ ಮಾದವ ಗೌಡ ಕಾಳಮನೆ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.