ಪೆರಾಜೆ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಅಭಿನಂದನಾ ಸಮಾರಂಭ

0


ಪೆರಾಜೆ ವಲಯ ಕಾಂಗ್ರೇಸ್ ಸಮಿತಿ ಸಭೆಯು ಪೆರಾಜೆ ಅನ್ನಪೂರ್ಣೇಶ್ವರಿ ಸಭಾಂಭವನದಲ್ಲಿ ನಡೆಯಿತು.


ವಿರಾಜೇಪೇಟೆ ಶಾಸಕ ಎ. ಎಸ್. ಪೊನ್ನಣ್ಣ ಭಾಗವಹಿಸಿದರು. ಕೊಡಗು ಪೆರಾಜೆ ವಲಯ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಜಯರಾಂ ಅಧ್ಯಕ್ಷತೆ ವಹಿಸಿದ್ದರು.

.ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಕೊಲ್ಯದ ಗಿರೀಶ್, ಸುಳ್ಯ ನಗರ ಪಂಚಾಯತ್ ಸದಸ್ಯ ವೆಂಕಪ್ಪ ಗೌಡ, ಸುರೇಶ ಪೆರುಮುಂಡ, ಸೂರಜ್ ಹೊಸೂರ್, ಸಂಪಾಜೆ ಬೂತ್ ಅಧ್ಯಕ್ಷ ರಿತಿನ್ ಡೆಮ್ಮಲೆ, ಕಿನ್ನಿರ ಮೈನಾ, ಪಂಚಾಯತ್ ಸದಸ್ಯ ಭೂದೇವಿ, ರಾಜೇಶ್ವರಿ, ಉಮೇಶ್ ಕುಂಬಳ ಜೇರಿ, ಪಕ್ಷದ ಮುಖಂಡರಾದ ಮೊಯಿದು ಕುಂಞಿ, ಕೊಯಿನಾಡು ಬೂತ್ ಅಧ್ಯಕ್ಷ ಎಮ್. ಪಿ. ವಾಸು, ಅಬೂಬಕ್ಕರ್ ಪೆರಾಜೆ, ಗೋಕುಲ್ ದಾಸ್, ಭವಾನಿಶಂಕರ್ ಕಲ್ಮಡ್ಕ, ಅನಿಲ್ ಬಳ್ಳಡ್ಕ ಇದ್ದರು. ಸುರೇಶ್ ಪೆರುಮುಂಡ ಸ್ವಾಗತಿಸಿ, ಲಿಮಿತ ಹಾಗೂ ನಿಸಾರ್ ಕಾರ್ಯಕ್ರಮ ನಿರೂಪಿಸಿದರು. ತುಳಸಿ ಗಾಂಧಿ ಪ್ರಕಾಶ್ ,ಮನು ಪೆರುಮುಂಡ ಕೆ.ಅರ್.ಸಿ.ಮಹಮ್ಮದ್, ಸಿಯಾಬ್ ಪೆರಾಜೆ ಸಹಕರಿಸಿದರು. ವಿವಿಧ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.