ಸುಬ್ರಹ್ಮಣ್ಯಕ್ಕೆ ಬಂದ ವಿವಾಹಿತ ಮಹಿಳೆ ಕಾಣೆ

0

ತಂದೆಯಿಂದ ಪೊಲೀಸ್ ದೂರು

ಸುಬ್ರಹ್ಮಣ್ಯದ ಆಸ್ಪತ್ರೆಗೆ ಚಿಕಿತ್ಸೆ ಗಾಗಿ ಬಂದ ಮಗಳು ಜು.31 ಕಾಣೆಯಾಗಿರುವುದಾಗಿ ತಂದೆ ದೂರು ನೀಡಿದ ಘಟನೆ ವರದಿಯಾಗಿದೆ.

ಬಿಳಿನೆಲೆ ಗ್ರಾಮದ ದೇವಸ್ಯ ಮನೆ ಮಾಯಿಲಪ್ಪ ಗೌಡ ಎಂಬವರು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿದ್ದು
ಮಗಳು ತೀರ್ಥಲತಾ ನ್ನು ಗದಗದ ಮುಂಡರಗಿಯ ಶಿವರಾಜ್ ಎಂಬವನಿಗೆ ಮದುವೆ ಮಾಡಿಕೊಡಲಾಗಿತ್ತು. ಮನೆಗೆ ಬಂದ ತೀರ್ಥಲತಾ ಸುಬ್ರಹ್ಮಣ್ಯಕ್ಕೆ ಹಲ್ಲಿನ ಚಿಕಿತ್ಸೆಗಾಗಿ ತೆರಳಿದ್ದಳು. ಬಳಿಕ ಮನೆಗೆ ವಾಪಾಸ್ಸಾಗಿರುವುದಿಲ್ಲ, ಹುಡುಕಾಡಿದರೂ ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.