ಬೇಂಗಮಲೆ : ಅಪಾಯವನ್ನು ಆಹ್ವಾನಿಸುತ್ತಿರುವ ರಸ್ತೆ ಬದಿಯ ಮರಗಳು

0

ಮರಗಳ ತೆರವುಗೊಳಿಸಲು ಸಾರ್ವಜನಿಕರ ಮನವಿ

ಐವರ್ನಾಡು ಗ್ರಾಮದ ಬೇಂಗಮಲೆ ರಸ್ತೆಯ ಬದಿಯಲ್ಲಿರುವ ಮರಗಳು ರಸ್ತೆಗೆ ವಾಲಿಕೊಂಡಿದ್ದು ಅಪಾಯವನ್ನು ಆಹ್ವಾನಿಸುವಂತಿದೆ.
ಇತ್ತೀಚೆಗೆ ಗಾಳಿ,ಮಳೆಗೆ ರಾತ್ರಿ ಸಮಯದಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಕೆಲಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು.

ರಾತ್ರಿ ಹೊತ್ತು ಮರ ಬಿದ್ದಿರುವುದರಿಂದ ಸಂಭವಿಸಬಹುದಾದ ಅಪಾಯ ತಪ್ಪಿದಂತಾಗಿದೆ.

ಆದರೆ ರಸ್ತೆ ಸ್ಥಗಿತಗೊಂಡಿದ್ದು ವಾಹನ ಸವಾರರಿಗೆ ತೊಂದರೆಯಾಗಿತ್ತು.
ಇದನ್ನು ಮನಗಂಡ ದೇರಾಜೆ ಗೆಳೆಯರ ಬಳಗದ ಸದಸ್ಯರು ರಾತ್ರಿಯೇ ಮರವನ್ನು ಕೊಯ್ದು ರಸ್ತೆಯಿಂದ ತೆರವುಗೊಳಿಸಿ ರಸ್ತೆ ಸಂಪರ್ಕಕ್ಕೆ ಅನುವು ಮಾಡಿಕೊಟ್ಟಿದ್ದರು.

ಸೋಣಂಗೇರಿ ಕಡೆಯಿಂದ ಬೆಳ್ಳಾರೆ,ಚೊಕ್ಕಾಡಿ ,ಕುಕ್ಕುಜಡ್ಕ ಕಡೆಗೆ ಹೋಗುವ ರಸ್ತೆ ಇದಾಗಿದ್ದು ಇದರಲ್ಲಿ ನೂರಾರು ವಾಹನಗಳು ಸಂಚರಿಸುತ್ತಿರುತ್ತದೆ.ಕಳೆದ ಬಾರಿ ಮರ ಬಿದ್ದ ಅದೇ ಜಾಗದಲ್ಲಿ ಈಗ ಮರಗಳು ರಸ್ತೆಗೆ ವಾಲಿಕೊಂಡಿದ್ದು ಅರಣ್ಯಾಧಿಕಾರಿಗಳು ಮರವನ್ನು ತೆರವುಗೊಳಿಸಿ ಆಗುವ ಅನಾಹುತವನ್ನು ತಪ್ಪಿಸಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ.