ಪಂಜ ಲಯನ್ಸ್ ಕ್ಲಬ್ ವತಿಯಿಂದ: ನೇಜಿನಾಟಿ ಪ್ರಾತ್ಯಕ್ಷಿತೆ ಮತ್ತು ಮಾಹಿತಿ ಕಾರ್ಯಗಾರ.

0

ಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ನೇಜಿ ನಾಟಿ ಮತ್ತು ಮಾಹಿತಿ ಕಾರ್ಯಗಾರವು ಲ.ಸುರೇಶ್ ಕುಮಾರ್ ನಡ್ಕ ಗದ್ದೆಯಲ್ಲಿ ಆ.,1 ರಂದು ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಜೇಸಿಐ ನ ವಲಯ ತರಬೇತುದಾರ ಜೇಸಿ ತೀರ್ಥಾನಂದ ಕೊಡೆಂಕಿರಿ ಮಾಹಿತಿ ನೀಡಿದರು. ಪ್ರಕೃತಿ ಯುವತಿ ಮಂಡಲ ಸದಸ್ಯರು ಭಾಗವಹಿಸಿ ಪ್ರಯೋಜನ ಪಡೆದರು.

ಶಾಲಾ ಸ್ಕೌಟ್ ಮತ್ತು ಗೈಡ್ ಮಕ್ಕಳಿಗೆ ವಿಶೇಷ ತರಬೇತಿ ಮತ್ತು ಪ್ರಾತ್ಯಕ್ಷಿಕೆ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ವಲಯಧ್ಯಕ್ಷ ಲ.ಸಂತೋಷ್ ಜಾಕೆ, ತರಬೇತುದಾರ ಜೇಸಿ ತೀರ್ಥಾನಂದ ಕೊಡೆಂಕಿರಿ, ಪ್ರಕೃತಿ ಯುವತಿ ಮಂಡಲ ಉಪಾಧ್ಯಕ್ಷೆ ರಾಜೀವಿ ರೈ, ಕಾರ್ಯಕ್ರಮದ ಪ್ರಯೋಜಕರಾದ ಲ. ಸುರೇಶ್ ಕುಮಾರ್ ನಡ್ಕ ಲಯನ್ಸ್ ಕ್ಲಬ್ ಕಾರ್ಯದರ್ಶಿ ಲ.ವಾಸುದೇವ ಮೇಲ್ಪಾಡಿ ಖಜಾಂಜಿ ಲ.ಆನಂದ ಗೌಡ ಜಳಕದಹೊಳೆ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಲ.ಕುಸುಮಾಧರ ಕೆಮ್ಮೂರು ವೇದಿಕೆಗೆ ಆಹ್ವಾನಿಸಿದರು. ಲ.ವಾಸುದೇವ ಮೇಲ್ಪಾಡಿ ವಂದಿಸಿದರು.