ಸಾಹಿತಿ ಎಚ್.ಭೀಮರಾವ್ ವಾಷ್ಠರ್ ರಿಗೆ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ

0

ಕರ್ನಾಟಕ ರಾಜ್ಯ ಭಾವೈಕ್ಯತೆ ಪರಿಷತ್ ದಕ್ಷಿಣ ಕನ್ನಡ ಆಯೋಜಿಸಿದ್ದ ರಾಜ್ಯಮಟ್ಟದ ಭಾವೈಕ್ಯತಾ ಕವಿ ಸಮ್ಮಿಲನ ಮತ್ತು ಕವಿಗೋಷ್ಠಿ ಸಮಾರಂಭದಲ್ಲಿ ಸುಳ್ಯದ ಸಾಹಿತಿ , ಜ್ಯೋತಿಷಿ , ಸಂಘಟಕ ಮತ್ತು ಚಿತ್ರ ನಿರ್ದೇಶಕರಾದ ಎಚ್.ಭೀಮರಾವ್ ವಾಷ್ಠರ್ ಅವರಿಗೆ ಭಾವೈಕ್ಯತಾ ಸಾಹಿತ್ಯ ರತ್ನ ರಾಜ್ಯಪ್ರಶಸ್ತಿಯನ್ನು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇಕ್ಬಾಲ್ ಬಾಳಿಲ ಅವರು ಪ್ರದಾನ ಮಾಡಿದರು .

ಸಮಾರಂಭದ ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಅಬೂಬಕರ್ ಅನಿಲಕಟ್ಟೆ ವಿಟ್ಲ , ಸಂಚಾಲಕರಾದ ಅಬ್ದುಲ್ ಅಝೀಝ್ ಪುಣಚ , ಡಾ.ಸುರೇಶ ನೇಗಿಲಗುಳಿ , ಎ ಬಿ ಎಮ್ ಕಳಂಜ , ಡಾ. ಮ್ಯಾಕ್ಸಿಮ್ ಡಿಸೋಜಾ , ಮಹಮ್ಮದ್ ಹಾಜಿ ಪರಪ್ಪು ಇನ್ನಿತರರು ಉಪಸ್ಥಿತರಿದ್ದರು .