ಬೆಳ್ಳಾರೆಯಲ್ಲಿ ಕಥೆ ಬರೆಯುವ ಅಭಿಯಾನ ಕಾರ್ಯಕ್ರಮ

0

ಗ್ರಾಮ ಪಂಚಾಯತ್ ಬೆಳ್ಳಾರೆ , ಗ್ರಂಥಾಲಯ ಬೆಳ್ಳಾರೆ ಹಾಗೂ ಡಾ. ಶಿವರಾಮ ಕಾರಂತ ಸರಕಾರಿ ಪ್ರಥಮ ದಜೆ೯ ಕಾಲೇಜು ಬೆಳ್ಳಾರೆ ಪೆರುವಾಜೆ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಇದರ ವತಿಯಿಂದ ಸಣ್ಣ ಕಥೆ ಬರೆಯುವ ಅಭಿಯಾನ ಆ.05 ರಂದು ರಾಜೀವ ಗಾಂಧಿ ಸೇವಾ ಕೇಂದ್ರ ಬೆಳ್ಳಾರೆ ಇಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಶ್ಯಾಮ್ ಪ್ರಸಾದ್ ಎಂ. ಆರ್. ಮಕ್ಕಳಿಗೆ ಈ ರೀತಿಯ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ ಎಷ್ಟು ಮುಖ್ಯ ಎಂಬುದನ್ನು ತಿಳಿಸಿದರು.

ತೀರ್ಪುಗಾರರಾಗಿ ಶ್ರೀಮತಿ ಅಶ್ವಿನಿ ಕೋಡಿಬೈಲು ಹಾಗೂ ಯತೀಶ್ ಕುಮಾರ್, ‘ಇಂಗ್ಲಿಷ್ ಉಪನ್ಯಾಸಕರು ,ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಪೆರುವಾಜೆ ಇವರು ಸಹಕರಿಸಿದರು. ಪೆರುವಾಜೆ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಧನ್ಯಶ್ರೀ ಬಿ ಎಸ್. ಪವಿತ್ರ ಎಂ . ಕವನ ಪಿ.ಆರ್. ಭವಿತಾ ಸಿ.ಆರ್. ಕಾರ್ಯಕ್ರಮ ಸಂಯೋಜಿಸಿ ವಂದನಾರ್ಪಣೆಗೈದರು. ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ 55 ಮಕ್ಕಳು ಭಾಗವಹಿಸಿದರು.