ಗುಂಡೇಟಿನಿಂದ ಕಡವೆ ಸಾವು

0

ಪೋಸ್ಟ್ ಮಾರ್ಟಂ ವೇಳೆ ಖಚಿತ

ಕಡವೆ ದೇಹದೊಳಗೆ ಚಿಲ್ಲ್ ಪತ್ತೆ

ನಿನ್ನೆ ಸಂಜೆ ಅರಂತೋಡಿನ ಉಕ್ರಾಜೆ ಬೈಲು ಕಾಡಿನೊಳಗೆ ಕಡವೆ ದೇಹವೊಂದು ಪತ್ತೆಯಾಗಿದ್ದು, ಅದು ಗುಂಡೇಟಿನಿಂದ ಸಾವಿಗೀಡಾದುದೆಂದು ಖಚಿತಪಟ್ಟಿದೆ.


ಇಂದು ಸುಳ್ಯ ಎ.ಸಿ.ಎಫ್. ಪ್ರವೀಣ್ ಶೆಟ್ಟಿ, ರೇಂಜರ್ ಮಂಜುನಾಥ್ ಮತ್ತು ಸಿಬ್ಬಂದಿ, ಪಶುವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ಹಾಗೂ ಸಿಬ್ಬಂದಿ ಅರಂತೋಡು ಉಕ್ರಾಜೆಬೈಲಿಗೆ ಹೋಗಿ ಪೋಸ್ಟ್ ಮಾರ್ಟಂ ನಡೆಸಿದ ವೇಳೆ ಕಡವೆಗೆ ಗುಂಡು ಹೊಡೆದು ಕೊಂದಿರುವುದು ಖಚಿತಪಟ್ಟಿದೆ.


ಸುಮಾರು ಆರು ವರ್ಷದ ಹೆಣ್ಣು ಕಡವೆಯಾದ ಅದರ ಹೊಟ್ಟೆಯ ಭಾಗದಿಂದ ಗುಂಡು ದೇಹದೊಳಗೆ ಸೇರಿರುವ ಗಾಯವಿದೆ. ದೇಹದೊಳಗೆ ಗುಂಡಿನ ಚಿಲ್ಲ್ ಕೂಡ ದೊರೆತಿದೆ.
ಪ್ರಕರಣ ದಾಖಲಿಸಿಕೊಂಡಿರುವ ವಲಯಾರಣ್ಯಾಧಿಕಾರಿಗಳು ಗುಂಡು ಹೊಡೆದವರ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.