ಬಾಳುಗೋಡಿನಲ್ಲಿ ಆಟಿಡೊಂಜಿ ಕೆಸರ್ದ ಗೊಬ್ಬು ಕಾರ್ಯಕ್ರಮ

0

ವಿಶ್ವ ಯುವಕ ಮಂಡಲ ಬಾಳುಗೋಡು ಇದರ ಆಶ್ರಯದಲ್ಲಿ ಆ.13 ರಂದು ಆಟಿಡೊಂಜಿ ಕೆಸರ್ದ ಗೊಬ್ಬು ಕಾರ್ಯಕ್ರಮ ಪುಣೇರಿಯಲ್ಲಿ ನಡೆಯಿತು.

ಆ ಪ್ರಯುಕ್ತ ಸುಳ್ಯ -ಕಡಬ ತಾಲೂಕು ಮಟ್ಟದ ಪುರುಷರ ಹಾಗೂ ಮಹಿಳೆಯರ ಮುಕ್ತ ಹಗ್ಗಜಗ್ಗಾಟ ಹಾಗೂ ಬಾಳುಗೋಡು, ಹರಿಹರ ಪಲ್ಲತಡ್ಕ, ಐನೆಕಿದು, ಕೊಲ್ಲಮೊಗ್ರು, ಕಲ್ಮಕಾರು ಗ್ರಾಮಗಳನ್ನೊಳಗೊಂಡ ಪುರುಷರ ವಾಲಿಬಾಲ್ ಹಾಗೂ ಮಹಿಳೆಯರ ತ್ರೋಬಾಲ್ ಮತ್ತು ವಿವಿಧ ಆಟೋಟಗಳ ಕೆಸರುಗದ್ದೆ ಕ್ರೀಡಾಕೂಟ ನಡೆಯಿತು.

ವಿಶ್ವ ಯುವಕ ಮಂಡಲ ಮಾಜಿ ಅಧ್ಯಕ್ಷ ವಿಶ್ವನಾಥ ಅವರು ಇಂದು ಬೆಳಗ್ಗೆ ಗದ್ದೆಗೆ ಹಾಲು ಎರದು ಕಾರ್ಯಕ್ರಮ ಉದ್ಘಾಟಿಸಿದರು.

ವಿಶ್ವ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಕಿರಿಭಾಗ ಅಧ್ಯಕ್ಷತೆ ವಹಿಸಿದ್ದರು. ಪದ್ಮನಾಭ ಕಿರಿಭಾಗ, ಮಾಜಿ ಸೈನಿಕ ಧನಂಜಯ ಬಾಳುಗೋಡು, ಹರಿಹರ ಪಲ್ಲತಡ್ಕ ಗ್ರಾ.ಪಂ ಅಧ್ಯಕ್ಷ ಜಯಂತ ಬಾಳುಗೋಡು ವೇದಿಕೆಯಲ್ಲಿದ್ದರು.

ಯಶಸ್ವಿ ಪ್ರಾರ್ಥಿಸಿದರು. ಹಾರ್ದಿಕ್ ಕಿರಿಭಾಗ ವಂದಿಸಿದರು. ಅಜೇಯ ಪೊಯ್ಯಮಜಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.