ಪೆರುವಾಜೆ : ಬಿದ್ದ‌ಮರ ತೆರವುಗೊಳಿಸಿದ ಶೌರ್ಯ ವಿಪತ್ತು ತಂಡ

0

ಪೆರುವಾಜೆ ಶ್ರೀ ಜಲದುರ್ಗ ದೇವಿ ದೇವಸ್ಥಾನ ಪೆರುವಾಜೆ ಜಲಕದ ಗುಂಡಿಯ ಹತ್ತಿರ ತಂಗುದಾನಕ್ಕೆ ಮರ ಬಿದ್ದದ್ದನ್ನು ಶ್ರೀ ಕ್ಷೇತ್ರ ಧರ್ಮದ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವಿಪತ್ತು ಶೌರ್ಯ ತಂಡದ ಸದಸ್ಯರು ಮರವನ್ನು ತೆರವುಗೊಳಿಸಿ, ತಂಗುದಾನದ ಸುತ್ತಮುತ್ತ ಸ್ವಚ್ಛತೆಯನ್ನು ಮಾಡಿದರು.

ಈ ಸಂದರ್ಭ ವಿಪತ್ತು ಶೌರ್ಯ ಘಟಕದ ಸಂಯೋಜಕೀಯದ ಶ್ರೀಮತಿ ಹರಿಣಾಕ್ಷಿ, ಸದಸ್ಯರಾದ ಸುಂದರ ನಾಯ್ಕ, ರಮೇಶ.ಎಂ ನಾಯ್ಕ, ರಾಜೇಶ್ ನಾಯ್ಕ, ಸೇಸಪ್ಪ ನಾಯ್ಕ, ನಾರಾಯಣ ನಾಯ್ಕ ಉಪಸ್ಥಿತರಿದ್ದರು.

ಶ್ರೀ ಜಲದುರ್ಗ ದೇವಸ್ಥಾನ ಪೆರುವಾಜೆ ಆಡಳಿತ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿಯವರು ತಂಗುದಾನಕ್ಕೆ ಎರಡು ಸೀಟ್ ನ ವ್ಯವಸ್ಥೆಯನ್ನು ಮಾಡಿದ್ದರು.