ಅಡ್ಕ ಎಸ್ ಕೆ ಎಸ್‌ ಎಸ್ ಎಫ್ ಮತ್ತು ಅಲ್ ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ವತಿಯಿಂದ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಧ್ವಜಾರೋಹಣ

0

ಅಲ್ ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ರಿ ಅಡ್ಕ ಅಜ್ಜಾವರ ಮತ್ತು ಎಸ್ ಕೆ ಎಸ್‌ ಎಸ್ ಎಫ್ ಅಡ್ಕ ಇರುವಂಬಳ್ಳ ಶಾಖೆ ವತಿಯಿಂದ 77 ನೇ ಸ್ವಾತಂತ್ರ್ಯ ದಿನಾಚರಣೆ ಎಸ್ ಕೆ ಎಸ್‌ ಎಸ್ ಎಫ್ ಅಡ್ಕ ಇರುವಂಬಳ್ಳ ಶಾಖೆ ಅಧ್ಯಕ್ಷರಾದ ಸಿದ್ದೀಕ್ ಅಡ್ಕ ರವರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ಮತ್ತು ಅವಾರ್ಡ್ ವಿತರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಅಲ್ ಅಮೀನ್ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಕೆ ಎ ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ನ್ಯಾಯವಾದಿಗಳಾದ ಪವಾಝ್ ಕನಕಮಜಲು ಮತ್ತು ರಾಹುಲ್ ಅಡ್ಪಂಗಾಯ ರವರು ಸ್ವಾತಂತ್ರ್ಯ ವಿಷಯದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಅಜ್ಜಾವರ ಸರಕಾರಿ ಪ್ರೌಢ ಶಾಲೆ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದ ಹಾಸಿಮ್ ಆಜ್ಜಾವರ,

ಮುರ್ಶಿದತುಲ್ಲಾಬ್ ಮದ್ರಸ ಅಡ್ಕ ಏಳನೇ ಮತ್ತು ಐದನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ರಫಾ, ರಾಝಿ, ಫಹಿಮಾ ರವರಿಗೆ ಕ್ಯಾಶ್ ಅವಾರ್ಡ್ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿವೇಕ್ ಸ್ಕೂಲ್ ಸಂಚಾಲಕರಾದ ಹಸೈನಾರ್ ಹಾಜಿ ಗೊರಡ್ಕ, ಬದ್ರಿಯಾ ಜುಮಾ ಮಸೀದಿ ಉಪಾಧ್ಯಕ್ಷರಾದ ಹಸೈನಾರ್ ದರ್ಮತಣ್ಣಿ, ಪ್ರ ಕಾರ್ಯದರ್ಶಿ ಮಹಮ್ಮದ್ ಕುಂಞಿ ತುಪ್ಪಕಲ್ಲು, ಅಡ್ಕ ಮುರ್ಶಿದತುಲ್ಲಾಬ್ ಮದ್ರಸ ಅಧ್ಯಾಪಕರು ಅಲಿ ಮುಸ್ಲಿಯಾರ್,

ಅಲ್ ಅಮೀನ್ ಗಲ್ಫ್ ಅಧ್ಯಕ್ಷರಾದ ಅಬೂಬಕ್ಕರ್ ಸಿ ಎಚ್,ಅಡ್ಪಂಗಾಯ ವಾರ್ಡ್ ಅಧ್ಯಕ್ಷರಾದ ರವೀಶ್ ಮಾವಿನಪಳ್ಳ ಸೇರಿದಂತೆ ಹಲವಾರು ಊರಿನ ಗಣ್ಯರು, ಅಲ್ ಅಮೀನ್ ಮತ್ತು ಎಸ್ ಕೆ ಎಸ್‌ ಎಸ್ ಎಫ್ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಅಲ್ ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಅಬ್ದುಲ್ ಖಾದರ್ ಕೆ ಎಂ ಸ್ವಾಗತಿಸಿ , ಸಿದ್ದೀಕ್ ಬೊವೀಕ್ಕಾನ ವಂದಿಸಿ ನಿರೂಪಿಸಿದರು .‌‌