ಸ್ವಾತಂತ್ರ್ಯೋತ್ಸವ ಪ್ರಯುಕ್ತ ಸುಳ್ಯದಲ್ಲಿ ಗಾನ ನಮನ -‌ಗೌರವಾರ್ಪಣೆ

0

ಗಾಯಕಿ ಆರತಿ ಪುರುಷೋತ್ತಮ ನೇತೃತ್ವದ ಸಾಹಿತ್ಯ ಸಂಗೀತ ಕಲಾ‌ ಕೇಂದ್ರ, ಅರಂತೋಡು ಶಾಖೆ ಇವರ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಗಾನ ನಮನ ಮತ್ತು ಗೌರವಾರ್ಪಣೆ ಕಾರ್ಯಕ್ರಮ ಆ.15 ರಂದು‌ ಸುಳ್ಯ ಅಂಬಟೆಡ್ಕದ ವೆಂಕಟರಮಣ ದೇವ ಮಂದಿರದಲ್ಲಿ ನಡೆಯಿತು.

ಆರತಿ ಪುರುಷೋತ್ತಮರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಳ್ಯ ಎನ್ನೆಂಸಿ ಸಹಾಯಕ ಪ್ರಾಧ್ಯಾಪಕಿ ಡಾ.ಮಮತಾ ಪುರುಷೋತ್ತಮ, ಸುಳ್ಯ ವೆಂಕಟರಮಣ ದೇವ ಮಂದಿರದ ಆಡಳಿತ ಮಂಡಳಿ ಕಾರ್ಯದರ್ಶಿ ಜಿ.ಜಿ.ನಾಯಕ್ ಮುಖ್ಯ ಅತಿಥಿಗಳಾಗಿದ್ದರು.

ಸಮಾರಂಭದಲ್ಲಿ ನಿವೃತ್ತ ಯೋಧ ನವೀನ್ ಕೆ.ಜಿ., ಸುಳ್ಯ ಪೋಲೀಸ್ ಠಾಣೆ ಕ್ರೈಂ ಎಸ್.ಐ. ಸರಸ್ವತಿ ಬಿ.ಟಿ., ಸುಳ್ಯ ಅಗ್ನಿಶಾಮಕ ಇಲಾಖೆಯ‌ ನಿವೃತ್ತ ಸಹಾಯಕ ಠಾಣಾಧಿಕಾರಿ ಯು.ಬಿ. ರಾಜಗೋಪಾಲ್ ಉಳುವಾರು,‌ ಗೃಹರಕ್ಷಕ ಸಿಬ್ಬಂದಿ‌ ಶ್ರೀಮತಿ ಗೀತಾ‌ ಜಯನಗರರನ್ನು‌ ಸನ್ಮಾನಿಸಲಾಯಿತು.

ಶ್ರೀಮತಿ ನವ್ಯಾ ಸ್ವಾಗತಿಸಿದರು. ‌ಗಾಯಕ‌ ಹರ್ಷಿತ್‌ ಮರ್ಕಂಜ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಮೊದಲು ಮತ್ತು ನಂತರ ದೇಶ ಭಕ್ತಿಗೀತೆಗಳೊಂದಿಗೆ ಗಾನ ನಮನ ನಡೆಯಿತು.