ಸುಳ್ಯ : ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಗುರು ಪೂಜೆ ಕಾರ್ಯಕ್ರಮದ ಪೂರ್ವಭಾವಿ ಸಭೆ

0

ಸುಳ್ಯ ತಾಲೂಕು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಹಾಗೂ ಯುವ ವಾಹಿನಿ ಸುಳ್ಯ ಘಟಕ, ಸುಳ್ಯ ಘಟಕದ ಬಿರುವೆರ್ ಕುಡ್ಲ ಹಾಗೂ ಸುಳ್ಯ ಬಿಲ್ಲವ ಮಹಿಳಾ ಘಟಕ ಇವುಗಳ ಜಂಟಿ ಆಶ್ರಯದಲ್ಲಿ ಸೆಪ್ಟೆಂಬರ್ 3ರಂದು ಬೆಳ್ಳಾರೆಯ ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಗುರು ಪೂಜೆ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಆ 16ರಂದು ಸುಳ್ಯದ ಶೀತಲ್ ಹೋಟೆಲ್ ನ ಬ್ರಹ್ಮಶ್ರೀ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಎನ್. ಎಸ್. ಡಿ.ವಿಠಲ್ ದಾಸ್, ಕಾರ್ಯದರ್ಶಿಯಾದ ನವೀನ್ ಸಾರಕೆರೆ, ಸುಳ್ಯ ಘಟಕದ ಯುವವಾಹಿನಿಯ ಸ್ಥಾಪಕಾಧ್ಯಕ್ಷ ಶಿವಪ್ರಸಾದ್. ಕೆ. ವಿ, ಯುವವಾಹಿನಿ ಸುಳ್ಯ ಘಟಕದ ಮಾಜಿ ಅಧ್ಯಕ್ಷರಾದ ಅನಿಲ್ ಪೂಜಾರಿ ಕುತ್ಯಾಡಿ ಹಾಗೂ ಭರತ್ ಬೊಮ್ಮರ್, ಯುವ ವಾಹಿನಿ ಕೋಶಾಧಿಕಾರಿ ಸುನಿಲ್ ಪಟ್ಟೆ, ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿ ರಿ. ಇದರ ಸಂಘಟನಾ ಕಾರ್ಯದರ್ಶಿ ಪ್ರವೀಣ್ ಓಂಕಲ್, ಶೀತಲ್ ಹೋಟೆಲ್ ಮಾಲಕ ಗಣಪ ಸಾಲ್ಯಾನ್, ರವಿ ಚೊಕ್ಕಾಡಿ, ರವಿ ಕುಮಾರ್ ಅಡ್ಕಾರ್, ಮೋಹನ್ ಕುಮಾರ್, ಕೃಷ್ಣಪ್ಪ ಪೂಜಾರಿ ಬೇಳ್ಯ, ಸುಂದರ್ ಪೂಜಾರಿ ಸುಳ್ಯ, ರವೀಂದ್ರ ತೊಡಿಕಾನ, ವಸಂತ ಪೋಡುಂಬ, ಅಕ್ಷತಾ ಅನಿಲ್ ಕುತ್ಯಾ ಡಿ, ಬೃಂದಾ ಪೂಜಾರಿ ಮುಕ್ಕೂರು ಈ ಸಂದರ್ಭದಲ್ಲಿ ಉಪಸಿತರಿದ್ದರು.