ಬೆಳ್ಳಾರೆ ಸಹಕಾರಿ ಸಂಘಕ್ಕೆ ಡಿಸಿಸಿ‌ ಬ್ಯಾಂಕ್ ಪ್ರೋತ್ಸಾಹಕ ಪ್ರಶಸ್ತಿ

0

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಉತ್ತಮ ಸಹಕಾರಿ ಸಂಘ ಪ್ರೋತ್ಸಾಹಕ ಪ್ರಶಸ್ತಿ ನೀಡಲಾಯಿತು.

ಬೆಳ್ಳಾರೆ ಸಹಕಾರ ಸಂಘದ ಅಧ್ಯಕ್ಷ ಶ್ರೀರಾಮ ಪಾಟಾಜೆ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ರೈಯವರಿಗೆ ಡಿಸಿಸಿ‌ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಪ್ರಶಸ್ತಿ ಪ್ರದಾನಗೈದರು.

ಈ ಸಂದರ್ಭದಲ್ಲಿ ಸಹಕಾರ ಸಂಘದ ನಿರ್ದೇಶಕರುಗಳಾದ ಅನಿಲ್ ರೈ ಚಾವಡಿಬಾಗಿಲು,ಕರುಣಾಕರ ಆಳ್ವ, ಹರೀಶ, ಸುಂದರ ಕೆ.ಜೆ, ವಿಠಲದಾಸ್ ಎನ್.ಎಸ್.ಡಿ, ಶ್ರೀಮತಿ ನಿರ್ಮಲ ರೈ, ಶ್ರೀಮತಿ ಶಾರದಾ ರೈ,ಶ್ರೀಮತಿ ಸಾವಿತ್ರಿ
ಉಪಸ್ಥಿತರಿದ್ದರು.