ಯುರೇಶ್ ಬುಡ್ಲೆಗುತ್ತು‌ ಮನೆಯಿಂದ‌ ಚಿನ್ನಾಭರಣ ಕಳವು ಪ್ರಕರಣ

0

ಸುಳ್ಯ ವಲಯ ಛಾಯಾಗ್ರಾಹಕರಿಂದ ಪೊಲೀಸ್ ಇಲಾಖೆಗೆ ಮನವಿ

ಸುಳ್ಯ ವಲಯದ ಹಿರಿಯ ಛಾಯಾಗ್ರಾಹಕರಾದ ಯುರೇಶ್ ಬುಡ್ಲೆಗುತ್ತು ಇವರ ಮನೆಯಲ್ಲಿ ಜು.16 ರಂದು 15 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಕಳ್ಳತನದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲದಿರುವುದರಿಂದ ಕಳ್ಳರನ್ನು ಅತೀ ಶೀಘ್ರದಲ್ಲಿ ಪತ್ತೆ ಮಾಡಬೇಕೆಂದು ಸುಳ್ಯ ವಲಯ ಫೋಟೋಗ್ರಾಫರ್ ಅಸೋಸಿಯೇಷನ್ ವತಿಯಿಂದ ಸುಳ್ಯ ಪೋಲೀಸ್ ಅಧಿಕಾರಿಗಳಿಗೆ ಮನವಿ‌ ಆ.25 ರಂದು ಮನವಿ‌ಮಾಡಲಾಗಿದೆ.

ಕಳ್ಳತನ ಮಾಡಿದ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಚಿನ್ನಾಭರಣ ವಶ ಪಡಿಸಿಕೊಂಡು ತಮ್ಮ ಸಂಘದ ಸದಸ್ಯರಾದ ಯುರೇಶ್ ಬುಡ್ಲೆಗುತ್ತುರವರಿಗೆ ಹಿಂತಿರುಗಿಸುವಲ್ಲಿ ಹೆಚ್ಚು ಸಹಕರಿಸಬೇಕೆಂದು ಸುಳ್ಯ ವಲಯ ಛಾಯಾಗ್ರಾಹಕರ ಸಂಘದ ಸದಸ್ಯರು ಪೊಲೀಸ್ ವೃತ್ತನಿರೀಕ್ಷರಿಗೆ ಹಾಗೂ ಪೊಲೀಸ್ ಉಪನಿರೀಕ್ಷಕರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸುಳ್ಯ ಛಾಯಾಗ್ರಾಹಕ ಸಂಘದ ಅಧ್ಯಕ್ಷರಾದ ಹರೀಶ್ ರಾವ್, ಜಿಲ್ಲಾ ಸಂಘದ ಉಪಾಧ್ಯಕ್ಷರಾದ ಲೊಕೇಶ್ ಸುಬ್ರಹ್ಮಣ್ಯ, ಛಾಯಾಗ್ರಾಹಕ ಜಿಲ್ಲಾ ಸಹಕಾರಿ ಸಂಘದ ನಿರ್ದೇಶಕ ಕರುಣಾಕರ ಎಣ್ಣೆಮಜಲು, ಮಾಜಿ ವಲಯಾಧ್ಯಕ್ಷರಾದ ಬಾಲಕೃಷ್ಣ ಗುತ್ತಿಗಾರು, ಕೋಶಾಧಿಕಾರಿ ದಿವಾಕರ ಮುಂಡಾಜೆ, ಜಯಪ್ರಕಾಶ್ ಚಾಕೋಟೆ ಮೊದಲಾದ ಸದಸ್ಯರು ಉಪಸ್ಥಿತರಿದ್ದರು.

ಈ ಪ್ರಕರಣದಲ್ಲಿ ನಮ್ಮ ಇಲಾಖೆ ಹೆಚ್ಚು ಶ್ರಮ ವಹಿಸಿದ್ದು, ಅತೀ ಶೀಘ್ರದಲ್ಲೇ ಕಳ್ಳರನ್ನು ಪತ್ತೆಹಚ್ಚುವ ಭರವಸೆಯನ್ನು ಪೊಲೀಸ್ ಉಪನಿರೀಕ್ಷಕ ಈರಯ್ಯರವರು ಹೇಳಿದರು.