ಆಂಬುಲೆನ್ಸ್‌ಗೆ ಆಕ್ಸಿಜನ್ ಸಿಲಿಂಡರ್ ಹಾಗೂ ಸಹಾಯಧನ ನೀಡಿದ ನಿವೃತ್ತ ಆರ್. ಟಿ. ಓ. ಅಧಿಕಾರಿ

0

ಕಳೆದ ವರ್ಷ ತಾಂತ್ರಿಕ ತೊಂದರೆಯಿಂದ ಅಂಬ್ಯುಲೆನ್ಸ್ ನಲ್ಲಿ ಆಕ್ಸಿಜನ್ ಕೊರತೆ ಉಂಟಾದಾಗ ಗುತ್ತಿಗಾರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೇವೆ ಸಲ್ಲಿಸುತ್ತಿರುವ ಆಂಬ್ಯುಲೆನ್ಸ್ ನೆರವಿಗೆ ಬಂದು ತಕ್ಷಣವೇ ಸೇವೆ ನೀಡಿ ಸಂಕಷ್ಟದಲ್ಲಿ ಇದ್ದ ಅನಾರೋಗ್ಯ ದ ವ್ಯಕ್ತಿಯನ್ನು ರಕ್ಷಣೆ ಮಾಡಿತ್ತು.

ಈ ವಿಚಾರ ತಿಳಿದ ಆನಂದ ಗೌಡ ಈಶ್ವರಮಂಗಲ ಅವರು ಗುತ್ತಿಗಾರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗೆ ಕೊಡುಗೆಯಾಗಿ ಮತ್ತೊಂದು ಆಕ್ಸಿಜನ್ ಸಿಲಿಂಡರ್ ನೀಡಿದ್ದರು.
ಸುಳ್ಯಕ್ಕೆ ಭೇಟಿ ಮಾಡಿದ ಸಂದರ್ಭದಲ್ಲಿ ಆಕ್ಸಿಜನ್ ಸಿಲಿಂಡರ್‌ನ್ನು ಟ್ರಸ್ಟ್ ಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ವನಿತಾ ಆನಂದ ಗೌಡ, ಸಾತ್ವಿಕ್ ಕನ್ನಡ್ಕ, ಪ್ರವೀಣ್ ಕಡೋಡಿ, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಉಪಸ್ಥಿತರಿದ್ದರು.