ಮುರುಳ್ಯ ಗ್ರಾಮ ಪಂಚಾಯತ್ ನಲ್ಲಿ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಅನುಷ್ಠಾನ ಕಾರ್ಯಕ್ರಮ

0

ಮುರುಳ್ಯ ಗ್ರಾಮ ಪಂಚಾಯತ್ ನಲ್ಲಿ ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಗೃಹಲಕ್ಷ್ಮಿ ಫಲಾನುಭವಿಗಳ ಅನುಷ್ಠಾನ ಕಾರ್ಯಕ್ರಮ ಆ 30ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಸಂಜೀವಿನಿ ಸಂಘದವರ ಸಹಕಾರದಿಂದ ರಂಗೋಲಿಯ ಮುಖೇನ ಗೃಹಲಕ್ಷ್ಮಿ ಯೋಜನೆಯ ಚಿತ್ತಾರ ಬಿಡಿಸಲಾಗಿತ್ತು.

ಪಂಚಾಯತ್ ಅಧ್ಯಕ್ಷೆ ಹಾಗೂ ಸದಸ್ಯರು ಸೇರಿ ದೀಪ ಬೆಳಗಿಸಿ, ಫಲಾನುಭವಿಗಳನ್ನು ಬರಮಾಡಿಕೊಂಡರು.

ಅಧ್ಯಕ್ಷೆ ವನಿತಾ ಸುವರ್ಣ, ಉಪಾಧ್ಯಕ್ಷೆ ಕು.ಜಾನಕಿ ಮುರುಳ್ಯ, ಸದಸ್ಯರು, ಸಿಬ್ಬಂದಿಗಳು,

ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.