ಬಾಳಿಲ ಮುಖ್ಯ ರಸ್ತೆಯಲ್ಲಿ ಬಾಯಿತೆರೆದು ನಿಂತಿರುವ ಬೃಹತ್ ಹೊಂಡ, ಅಪಾಯ ಎದುರಾಗುವ ಮುನ್ನ ಇಲಾಖೆ ಎಚ್ಚೆತ್ತುಕೊಳ್ಳಲಿ : ಗ್ರಾಮಸ್ಥರು

0

ಬೆಳ್ಳಾರೆ ಸುಬ್ರಹ್ಮಣ್ಯ ಮುಖ್ಯ ರಸ್ತೆಯಲ್ಲಿ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಬಾಳಿಲ ಶಾಖೆಯ ಸಮೀಪ ದೊಡ್ಡ ಹೊಂಡ ನಿರ್ಮಾಣವಾಗಿದ್ದು, ಪ್ರಯಾಣಿಕರಿಗೆ ಅಪಾಯ ಕಾದಿದೆ.
ಮಳೆ ಬಂತೆಂದರೆ ಈ ಹೊಂಡದಲ್ಲಿ ನೀರು ತುಂಬಿಕೊಂಡು ಕೊಳದಂತಾಗುತ್ತದೆ. ಇದರ ಆಳ ಅರಿಯದೆ ದ್ವಿಚಕ್ರ, ತ್ರಿಚಕ್ರ ವಾಹನದವರು ಇದಕ್ಕೆ ಇಳಿಸಿದರೆ ಮತ್ತೆ ಹೊಂಡದಿಂದ ಮೇಲೆ ಹತ್ತುವುದೇ ಕಷ್ಟ. ಪ್ರತೀ ವರ್ಷ ಒಂದೆರಡು ಮಳೆಗೆ ಇಲ್ಲಿ ತೇಪೆ ಹಾಕಿದ ಡಾಮರು ಎದ್ದು ಹೋಗಿ ಹೊಂಡ ನಿರ್ಮಾಣ ಆಗುತ್ತದೆ. ಇಲಾಖೆ ಇದಕ್ಕೆ ಶಾಶ್ವತ ಪರಿಹಾರ ಒದಗಿಸಲಿ ಎಂಬುದೇ ಈ ಭಾಗದ ವಾಹನ ಚಾಲಕರ, ಗ್ರಾಮಸ್ಥರ ಬೇಡಿಕೆ.