ಜಾಲ್ಸೂರು : ಅಗ್ನಿವೀರ್ ಕಿಶೋರ್ ರವರಿಗೆ ಅಂಗನವಾಡಿ ಕಾರ್ಯಕರ್ತೆಯರಿಂದ ಗೌರವಾರ್ಪಣೆ

0

ಇತ್ತೀಚೆಗೆ ಅಗ್ನಿವೀರ್ ತರಬೇತಿಯನ್ನು ಮುಗಿಸಿಕೊಂಡು ತನ್ನೂರಿಗೆ ಆಗಮಿಸಿದ ಕಿಶೋರ್ ರವರಿಗೆ ಜಾಲ್ಸೂರು ಗ್ರಾಮದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಂದ ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಮುಖಾಂತರ, ಜಾಲ್ಸೂರು ಗ್ರಾಮ ಪಂಚಾಯತ್ ನ ಸಭಾಭವನದಲ್ಲಿ ಗೌರವಾರ್ಪಣೆ ಇತ್ತೀಚೆಗೆ ನಡೆಯಿತು.

ಈ ಸಂದರ್ಭದಲ್ಲಿ ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ, ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಎ ಎಲ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಬ್ಬಯ್ಯ, ಕಾರ್ಯದರ್ಶಿ ಸುಂದರ, ಮಾಜಿ ಅಧ್ಯಕ್ಷ ಕೆ ಎಂ ಬಾಬು, ಸದಸ್ಯರಾದ ಸಂದೀಪ್ ಕುಮಾರ್ ಕದಿಕಡ್ಕ, ಗ್ರಾಮ್ ಆಡಳಿತಾಧಿಕಾರಿ ಶ್ರೀಮತಿ ಶಾಹಿನ, ಅಂಚೆಪಾಲಕಿ ಕುಮಾರಿ ವಂದಿತ, ವಿ ಆರ್ ಡಬ್ಲ್ಯೂ ಸದಾನಂದ ಹಾಗೂ ಪಂಚಾಯತ್ ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ಈ ಕಾರ್ಯಕ್ರಮದಲ್ಲಿ ಗ್ರಾಮದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು ಮತ್ತು ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಅಂಗನವಾಡಿ ಸಹಾಯಕಿ ಹಾಜರಿದ್ದರು.

ಅಗ್ನಿವೀರ್ ಕಿಶೋರ್ ಎಸ್. ರವರು ಜಾಲ್ಸೂರು ಗ್ರಾಮದ ಸೇಸನಡ್ಕ ಕೃಷ್ಣಪ್ಪ ಹಾಗೂ ಕದಿಕಡ್ಕ ಅಂಗನವಾಡಿ ಕೇಂದ್ರದ ಸಹಾಯಕಿ ಜಯಂತಿ ಇವರ ಪುತ್ರ.