ಅಡ್ಯಡ್ಕ: ರಕ್ಷಾಬಂಧನ ಆಚರಣೆ

0

ತೊಡಿಕಾನ ಗ್ರಾಮದ ಅಡ್ಯಡ್ಕದ ಶ್ರೀ ರಕ್ಷಾಬಂಧನ ಸೇವಾ ಗ್ರಾಮ ಸಮಿತಿಯ ವತಿಯಿಂದ
ಎರಡನೇ ವರ್ಷದ ರಕ್ಷಾಬಂಧನ ಕಾರ್ಯಕ್ರಮವು ಅಡ್ಯಡ್ಕದ ಶ್ರೀ ಚಾಮುಂಡಿ ಗುಡಿಯ ಬಳಿ ಆ.30ರಂದು ನಡೆಯಿತು.

ಅಣ್ಣಾದೊರೈ ಪಿ. ಅವರು ಅಧ್ಯಕ್ಷತೆ ವಹಿಸಿದ್ದರು.ಅರಂತೋಡು ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಸರ್ವಸದಸ್ಯರು, ಊರಿನ ನಾಗರಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.