ಚೆಕ್ ಬೌನ್ಸ್ ಪ್ರಕರಣ – ದಂಡದೊಂದಿಗೆ ಹಣ ಪಾವತಿಸಲು ಆರೋಪಿಗೆ ಕಾಲಾವಕಾಶ – ತಪ್ಪಿದರೆ ಜೈಲು ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

0

ಚೆಕ್ ಅಮಾನತು ಆರೋಪದಲ್ಲಿ ಆರೋಪಿಗೆ ದಂಡದೊಂದಿಗೆ ಹಣ ಪಾವತಿಸಲು ಒಂದು ತಿಂಗಳು ಕಾಲಾವಕಾಶ ನೀಡಿ ಸುಳ್ಯ ನ್ಯಾಯಾಲಯ ಆದೇಶ ಮಾಡಿದೆ.

ದೇವಚಳ್ಳ ಗ್ರಾಮದ ಭಾಸ್ಕರ ಬಾಳೆತೋಟ ಎಂಬವರಿಂದ ಎಲಿಮಲೆಯ ಮಹೇಶ್ ನೀರಬಿದಿರೆಯವರು ಹಣಕ್ಕೆ ಚೆಕ್ ನೀಡಿದ್ದರು. ಆದರೆ ತಿಂಗಳ ಕಂತಿನಂತೆ ಹಣ ನೀಡುತ್ತೇನೆ ಎಂದಿದ್ದ ಮಹೇಶ್ ಅವರು ಹಣ ನೀಡಿರಲಿಲ್ಲವೆನ್ನಲಾಗಿದೆ. ಮಹೇಶ್ ರವರು ನೀಡಿದ ಚೆಕ್ ಕೂಡ ಬೌನ್ಸ್ ಆಗಿತ್ತು. ಈ ಬಗ್ಗೆ ಭಾಸ್ಕರ ಬಾಳೆತೋಟರವರು ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ನ್ಯಾಯಾಲಯ ತೀರ್ಪು ನೀಡಿದ್ದು, ಈ ಪ್ರಕರಣದಲ್ಲಿ ಆರೋಪಿಯಾಗಿರುವ ಮಹೇಶ್ ಎಂಬವರಿಗೆ ಚೆಕ್ ಹಣ ರೂ. 3 ಲಕ್ಷ ಹಾಗೂ ದಂಡ ರೂ. 10 ಸಾವಿರವನ್ನು ಒಂದು ತಿಂಗಳ ಒಳಗೆ ಪಾವತಿಸಬೇಕು. ತಪ್ಪಿದಲ್ಲಿ ಆರು ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಬೇಕು ಎಂದು ನ್ಯಾಯಾಲಯ ಆದೇಶಿದೆ. ಭಾಸ್ಕರ ಬಾಳೆತೋಟ ಪರವಾಗಿ ನ್ಯಾಯವಾದಿ ವಿನಯ ಮುಳುಗಾಡು ವಾದಿಸಿದ್ದರು.