ಸುಳ್ಯದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಭಾರತ ಮೂಲದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು

0

ಸುಳ್ಯ ರಥಬೀದಿಯಲ್ಲಿರುವ ಸ್ವಾಮಿ ಪ್ರಸಾದ್ ಹೋಟೇಲಿನಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಉತ್ತರ ಭಾರತ ಮೂಲದ ಲೂಲು ೪೮ ವರ್ಷದ ವ್ಯಕ್ತಿ ಸೆಪ್ಟಂಬರ್ ೩ರಂದು ಹೃದಯಾಘಾತದಿಂದ ಕೆವಿಜಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕಳೆದ ಎರಡೂವರೆ ವರ್ಷಗಳಿಂದ ಇವರು ಈ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು. ಸೆಪ್ಟೆಂಬರ್ ೩ರಂದು ರಜೆ ಇದ್ದ ಕಾರಣ ಅವರು ರೂಮಿನಲ್ಲಿ ಮಲಗಿದ್ದ ಸಂದರ್ಭ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅವರ ಮನೆಯವರು, ಸಂಬಂಧಿಕರ ಮಾಹಿತಿ ತಿಳಿಯದ ಹಿನ್ನೆಲೆಯಲ್ಲಿ ಅವರ ಮೃತ ದೇಹವನ್ನು ಆಸ್ಪತ್ರೆಯ ಫ್ರೀಜರ್ ನಲ್ಲಿ ಇರಿಸಲಾಗಿದೆ.