ಸುಳ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಿಂದ ಪೌರಾಡಳಿತ ಸಚಿವರ ಭೇಟಿ

0

ಸುಳ್ಯನಗರ ಪಂಚಾಯತ್ ವ್ಯಾಪ್ತಿಯಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ನಿರ್ವಹಿಸಿದ ವಿವಿದ ಕಾಮಗಾರಿಗಳ ಬಿಲ್ಲುಗಳ ಹಣದ ಬಿಡುಗಡೆಗಾಗಿ ಈ ದಿನ ಮಂಗಳೂರಿನಲ್ಲಿ ಗುತ್ತಿಗೆ ದಾರರ ಸಂಘದ ಅಧ್ಯಕ್ಷರಾದ ಎಂ.ಕೆ ಅಬ್ದುಲ್ ಲತೀಫ್ ರವರು ಪೌರಾಡಳಿತ ಸಚಿವರಾದ ರಹೀಂಖಾನ್ ರವರನ್ನು ಬೇಟಿಯಾಗಿ ಮನವಿಯನ್ನು ಸಲ್ಲಿಸಿದರು.


ಈ ಸಂದರ್ಭದಲ್ಲಿ ಗುತ್ತಿಗೆದಾರರು ಕಳೆದ ಎರಡು ವರ್ಷಗಳಿಂದ ನಿರ್ವಹಿಸಿದ ವಿಶೇಷ ಅನುದಾನ ಬಿಲ್ಲನ್ನು ಪಾವತಿ ಸದೇ ಇರುವುದರಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವುದನ್ನು ಮಾನ್ಯ ಸಚಿವರಿಗೆ ಮನವರಿಕೆ ಮಾಡಿದ್ದು ಈ ಬಗ್ಗೆ ಸಚಿವರು ಕೂಡಲೇ ಸಂಬಂದ ಪಟ್ಟ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು