ಶೇಣಿ ಸಾರ್ವಜನಿಕ ಶ್ರೀ ಕೃಷ್ಣ ಸೇವಾ ಸಮಿತಿಯ ಪದಾಧಿಕಾರಿಗಳಗಳ ಆಯ್ಕೆ

0

ಅಧ್ಯಕ್ಷರಾಗಿ ರಘುರಾಮ ಕೋಟೆಬನ, ವಿವೇಕ್ ರೈ ಕಾರ್ಯದರ್ಶಿ

ಸಾರ್ವಜನಿಕ ಶ್ರೀ ಕೃಷ್ಣ ಸೇವಾ ಸಮಿತಿ ಶೇಣಿ ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಸೆ. 11ರಂದು ಸಮಿತಿ ಅಧ್ಯಕ್ಷ ದೀಕ್ಷಿತ್ ಪೋನಡ್ಕರವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಸ್ಥಾಪಕಾಧ್ಯಕ್ಷ ಧರ್ಮಪಾಲ ಪೂಜಾರಿ ಶೇಣಿ ಮತ್ತು ಪದಾಧಿಕಾರಿಗಳ, ಸದಸ್ಯರ ಉಪಸ್ಥಿತಿಯಲ್ಲಿ ನಡೆಯಿತು.


ಸಮಿತಿಯ ನೂತನ ಅಧ್ಯಕ್ಷರಾಗಿ ರಘುರಾಮ ಕೊಟೆಬನ, ಉಪಾಧ್ಯಕ್ಷರಾಗಿ ವಿಶ್ವನಾಥ ಕುಳ್ಳಾಜೆ, ಕಾರ್ಯದರ್ಶಿಯಾಗಿ ವಿವೇಕ್ ರೈ ಶೇಣಿ, ಜತೆ ಕಾರ್ಯದರ್ಶಿಯಾಗಿ ಕೇಶವ ಪೂಜಾರಿ ಕುಳ್ಳಾಜೆ, ಖಜಾಂಜಿಯಾಗಿ ಹರಿಪ್ರಸಾದ್ ಹೊಸಮಜಲು ಆಯ್ಕೆಯಾದರು.

ಗೌರವ ಸಲಹೆಗಾರರಾಗಿ ವಿಶ್ವನಾಥ ಮೋಟುಕಾನ, ತಿಮ್ಮಪ್ಪ ಪೂಜಾರಿ, ಮಾಧವ ಗೌಡ ಪಿಂಡಿಬನ, ವೃಜೇಶ್ ರೈ ಶೇಣಿ, ಗೌರವ ಸದಸ್ಯರಾಗಿ ಬಾಲಕೃಷ್ಣ ರೈ ಶೇಣಿ, ಬೋಜಪ್ಪ ಗೌಡ, ಆಹಾರ ಸಮಿತಿ ಸಂಚಾಲಕರಾಗಿ ಪ್ರಕಾಶ್ ಭಟ್ ಕುಳ್ಳಾಜೆ, ದೇಜಪ್ಪ ಪೂಜಾರಿ ಶೇಣಿ, ಅಶೋಕ್ ಸಾಲ್ಯಾನ್ ಪೋನಡ್ಕ, ಕ್ರೀಡಾ ಸಮಿತಿ ಸಂಚಾಲಕರಾಗಿ ಹರ್ಷಿತ್ ಪೋನಡ್ಕ, ಪ್ರಶಾಂತ್ ಸಾಲ್ಯಾನ್, ಅವಿನ್ ಶೇಣಿ, ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ಅಶ್ವಿನ್ ರೈ ಶೇಣಿ, ಸೃಜನ್ ಶೇಣಿ, ರತಿನ್ ಚೂಂತಾರು, ಪೂಜಾ ಸಮಿತಿ ಸಂಚಾಲಕರಾಗಿ ದೀಕ್ಷಿತ್ ಶೇಣಿ, ಅಶೋಕ್ ಸಾಲ್ಯಾನ್, ರಂಜಿತ್ ಕುಳ್ಳಾಜೆ, ಧಾರ್ಮಿಕ ಸಲಹೆಗಾರರಾಗಿ ಸಿದ್ಧಿವಿನಾಯಕ ಭಟ್ ಚೂಂತಾರು, ಕೆ.ವಿ ಪ್ರಸಾದ್ ಭಟ್ ಆಯ್ಕೆಯಾದರು.