ಸುಬ್ರಹ್ಮಣ್ಯ : ಶಾರ್ಟ್ ಸರ್ಕ್ಯೂಟ್‌ನಿಂದ ಕ್ವಾಲಿಸ್‌ನಲ್ಲಿ ಬೆಂಕಿ

0


ಸ್ಥಳೀಯರ ಸಮಯ ಪ್ರಜ್ಞೆಯಿಂದ ತಪ್ಪಿದ ಅಪಾಯ

ಕುಕ್ಕೆ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯ ಸರ್ಪಸಂಸ್ಕಾರ ಯಾಗಶಾಲೆಯ ಸಮೀಪ ಕ್ವಾಲಿಸ್ ಕಾರಿನಲ್ಲಿ ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿ ಕಾಣಿಸಿಕೊಂಡು ಸ್ಥಳೀಯರ ಸಮಯ ಪ್ರಜ್ಞೆಯಿಂದ ಸಂಭಾವ್ಯ ಅಪಾಯ ತಪ್ಪಿಸಿದ ಘಟನೆ ಸೆ.೧೫ ರಂದು ಬೆಳಗ್ಗೆ ವರದಿಯಾಗಿದೆ.

ಸುಮಾರು ೫.೩೦ ರ ವೇಳೆಗೆ ಬೆಂಗಳೂರಿನಿಂದ ಸರ್ಪಸಂಸ್ಕಾರಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಕುಟುಂಬ ಆದಿ ಸುಬ್ರಹ್ಮಣ್ಯದ ಸರ್ಪಸಂಸ್ಕಾರ ಯಾಗ ಶಾಲೆಯ ಮುಂಬಾಗ ಕ್ವಾಲಿಸ್ ಕಾರನ್ನು ನಿಲ್ಲಿಸಿತ್ತು. ಕಾರಿನ ಮುಂಭಾಗ ಅಚಾನಕ್ಕಾಗಿ ಬೆಂಕಿ ಕಾಣಿಸಿಕೊಂಡಿತು. ಇದನ್ನು ಕಂಡ ಹತ್ತಿರದಲ್ಲೇ ಇದ್ದ ಗಣೇಶ್ ಭಟ್ ಮತ್ತು ಸ್ಥಳೀಯರು ಕೂಡಲೇ ತಮ್ಮ ಸಮಯ ಪ್ರಜ್ಞೆಯಿಂದ ಬೆಂಕಿ ನಂದಿಸುವ ಉಪಕರಣ ಬಳಸಿ ಬೆಂಕಿ ನಂದಿಸಿದ್ದಾರೆ. ಆ ಮೂಲಕ ಕಾರಿನ ಹಿಂದೆ ಹಾಗೂ ಮುಂದೆ ಸಾಲಾಗಿ ನಿಂತಿದ್ದ ವಾಹನಗಳಿಗೆ ಬೆಂಕಿ ಹರಡದಂತೆ ಅನಾಹುತವನ್ನು ತಪ್ಪಿಸಿದ್ದಾರೆ.