ಬೆಳ್ಳಾರೆಯಲ್ಲಿ ಡಾ. ಕಾರ್ತಿಕ್ ಎಸ್.ರವರ ಪ್ರಶಾಂತಿ ಕ್ಲಿನಿಕ್ ಶುಭಾರಂಭ

0

ಡಾ. ಕಾರ್ತಿಕ್ ಎಸ್. ರವರ ಪ್ರಶಾಂತಿ ಕ್ಲಿನಿಕ್ ನೂತನವಾಗಿ ಸೆ. 16ರಂದು ಬೆಳ್ಳಾರೆಯ ಕೆಳಗಿನ ಪೇಟೆಯ ಮಾವಂಜಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.
ಹಿರಿಯ ವೈದ್ಯರಾದ ಡಾ. ಗೋಪಾಲಕೃಷ್ಣ ಪೈಲೂರು ದೀಪ ಬೆಳಗಿಸಿ ಕ್ಲಿನಿಕ್ ನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಹಿರಿಯ ವೈದ್ಯರಾದ ಡಾ. ಶಶಿಧರ್ ಪಡೀಲ್, ಮಠ ಗೋವಿಂದಯ್ಯ ಶುಭ ಹಾರೈಸಿದರು. ಸಾಯಿಪ್ರಸಾದ್ ಅಜ್ಜನಗದ್ದೆ, ಶ್ರೀಮತಿ ಶಶಿಕಲಾ ಎನ್, ಡಾ. ಕಾರ್ತಿಕ್, ಡಾ. ದಿವ್ಯಾ ಎಸ್. ಭಟ್ ಅತಿಥಿಗಳನ್ನು ಬರಮಾಡಿಕೊಂಡರು. ಪದ್ಯಾಣ ಗೋಪಾಲಕೃಷ್ಣ ಭಟ್, ಶ್ರೀಮತಿ ವಸಂತಿ ಜಿ. ಭಟ್, ಉಪ್ಪಿನಂಗಡಿಯಲ್ಲಿ ಮಕ್ಕಳ ತಜ್ಞರಾಗಿರುವ ಡಾ. ಎಂ.ಎನ್. ಭಟ್, ಡಾ. ಸುಬ್ರಹ್ಮಣ್ಯ ಎಸ್. ಭಟ್, ಡಾ. ವೀಣಾ ಸರಸ್ವತಿ, ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ಸವಣೂರು ಕೆ. ಸೀತಾರಾಮ ರೈ, ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ಸಂಚಾಲಕರಾದ ಎಂ.ಪಿ. ಉಮೇಶ್, ಬೆಳ್ಳಾರೆ ಸಿ.ಎ. ಬ್ಯಾಂಕಿನ ಮಾಜಿ ಅಧ್ಯಕ್ಷ ಶ್ರೀರಾಮ ಪಾಟಾಜೆ ಸೇರಿದಂತೆ ಊರ, ಪರ ಊರ ಅನೇಕ ಗ್ಮಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ನೂತನ ಕ್ಲಿನಿಕ್ ನಲ್ಲಿ ಫಾರ್ಮಸಿ, ಇಸಿಜಿ, ಲ್ಯಾಬೋರೇಟರಿ ಮತ್ತು ತುರ್ತು ಚಿಕಿತ್ಸೆಗಾಗಿ ಡೇಕೇರ್ ಬೆಡ್ ವ್ಯವಸ್ಥೆ ಕಲ್ಪಿಸಲಾಗಿದೆ.