ಬೆಳ್ಳಾರೆ : ತರಕಾರಿ ಅಂಗಡಿಯಿಂದ ಕಳವು – ಮೂವರ ಮೇಲೆ ಕೇಸು

0

ಬೆಳ್ಳಾರೆ ಪೇಟೆಯಲ್ಲಿ ತರಕಾರಿ ಅಂಗಡಿಯಿಂದ ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರ ಮೇಲೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ನಡೆದಿದೆ.
ಬೆಳ್ಳಾರೆ ಪೇಟೆಯಲ್ಲಿರುವ ಅತಾವುಲ್ಲಾ ಎಂಬವರ ಮಾಲಿಕತ್ವದ ಬಿ.ವಿ. ಎಂಬ ತರಕಾರಿ ಅಂಗಡಿಯಿಂದ ಜಮಾಲುದ್ದೀನ್ ಕೆ.ಎಸ್ ,ಅಜರುದ್ದೀನ್,ಸೂಫಿ ಕೆ.ಎಸ್.ಎಂಬವರು ತರಕಾರಿ,ಹಣ್ಣುಹಂಪಲು,ಜೇನು ಸೇರಿದಂತೆ ಸುಮಾರು 1,33,000 ರೂ ಮೌಲ್ಯದ ಸೊತ್ತು ಹಾಗೂ 12,000 ನಗದು ಕಳವುಗೈದಿರುವುದಾಗಿ ಮಹಮ್ಮದ್ ರಫೀಕ್ ಎಂಬವರು ಪೊಲೀಸ್ ದೂರು ನೀಡಿದ್ದು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here