ದೇವಚಳ್ಳ:ರೈತ ಕ್ಷೇತ್ರ ಕೃಷಿ ತರಬೇತಿ ಕಾರ್ಯಕ್ರಮ

0

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಗುತ್ತಿಗಾರು ವಲಯದ ದೇವಚಳ್ಳ ಕಾರ್ಯ ಕ್ಷೇತ್ರದಲ್ಲಿ ಸೆ. 17 ರಂದು ರೈತ ಕ್ಷೇತ್ರ ಕೃಷಿ ತರಬೇತಿ ಕಾರ್ಯಕ್ರಮ ಹರ್ಲಡ್ಕ ಧನಂಜಯ ಅವರ ಮನೆಯಲ್ಲಿ ನಡೆಯಿತು. ಅವರೇ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಭಾನುಪ್ರಕಾಶ ತಳೂರು ವಹಿಸಿದ್ದರು. ದಯಾ ಪ್ರಕಾಶ್ ಚೀಮುಳ್ಳು ಮಾಹಿತಿ ನೀಡಿದರು. ಶ್ಯಾಂ ಪ್ರಸಾದ್ ಗೊರಗೋಡಿ, ಜಗದೀಶ ಪರಮಲೆ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಾವಿನಕಟ್ಟೆ ಒಕ್ಕೂಟದ ಕಾರ್ಯದರ್ಶಿಯವರಾದ ಶ್ರೀಮತಿ ಭಾಗೀರಥಿ ಸ್ವಾಗತಿಸಿದರು. ಈ ಸಂದರ್ಭ ತಾಲೂಕು ಕೃಷಿ ಅಧಿಕಾರಿಯಾದ ರಮೇಶ್ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುತ್ತಿಗಾರು ಕಾರ್ಯ ಕ್ಷೇತ್ರದ ಸೇವಾ ಪ್ರತಿನಿಧಿ ಲೋಕೇಶ್ವರ ಡಿ. ಆರ್ ಕಾರ್ಯಕ್ರಮ ನಿರೂಪಿಸಿ ಎಲ್ಲರಿಗೂ ವಂದಿಸಿದರು ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರು ಹಾಗೂ ಕೃಷಿಕರು ಭಾಗವಹಿಸಿದ್ದರು.