ಉಬರಡ್ಕದ ಡಾ. ಪ್ರಶಾಂತಿ ಶಶಿಕಾಂತ್ ರಿಗೆ ಉನ್ನತ ಶಿಕ್ಷಣ ತಜ್ಞ ಪ್ರಶಸ್ತಿ ಪ್ರದಾನ

0

ಉಬರಡ್ಕದ ಡಾ. ಪ್ರಶಾಂತಿ ಶಶಿಕಾಂತ್ ಅವರಿಗೆ ಉನ್ನತ ಶಿಕ್ಷಣ ತಜ್ಞ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇಂಡಿಯನ್ ಸ್ಕೂಲ್ ಅವಾರ್ಡ್ಸ್ 2023 ರ ಮೂಲಕ ಪ್ರಿನ್ಸಿಪಾಲ್ ಕನೆಕ್ಟ್ ಕಾನ್ಕ್ಲೇವ್‌ನಲ್ಲಿ ITC ಯಿಂದ ವೆಲ್‌ಕಾಮ್‌ಹೋಟೆಲ್‌ನಲ್ಲಿ ಸೆಪ್ಟೆಂಬರ್ 8 ರಂದು ಅವರಿಗೆ ಪ್ರಶಸ್ತಿಯನ್ನು ನೀಡಲಾಯಿತು.
ಮಲೇಶಿಯಾ ವಿಶ್ವವಿದ್ಯಾಲಯದ ಶಿಕ್ಷಣತಜ್ಞರು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರಸ್ತುತ ಇವರು ಝೆನ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಬೆಂಗಳೂರಿನ ಪ್ರಿನ್ಸಿಪಾಲ್ ಆಗಿ ಕೆಲಸ ಮಾಡುತ್ತಿದ್ದಾರೆ.

ಅವರು ಉಬರಡ್ಕ ಪ್ರಾಥಮಿಕ ಕೃಷಿ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ರಾಘವ ರಾವ್ ಮತ್ತು ನಾಗವೇಣಿ ರಾವ್ ಅವರ ಪುತ್ರಿ.

ಇವರಿಗೆ ಶೈಕ್ಷಣಿಕ ವಲಯದಿಂದ ಸೂಪರ್ ಸಾಧಕ ಪ್ರಶಸ್ತಿ, ಆದರ್ಶ ಪ್ರಧಾನ ಪ್ರಶಸ್ತಿ ,ಅತ್ಯುತ್ತಮ ಪ್ರಿನ್ಸಿಪಾಲ್ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.