ಸೆ.30: ಸೋಣಂಗೇರಿ ಶ್ರೀ ವಿಷ್ಣುಮೂರ್ತಿ ವಯನಾಟ್ ಕುಲವನ್ ದೈವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಆಡಳಿತ ಮಂಡಳಿ ಮತ್ತು ಭಕ್ತಾದಿಗಳ ಸಭೆ

0

ಜಾಲ್ಸೂರು ಗ್ರಾಮದ ಸೋಣಂಗೇರಿ ಶ್ರೀ ವಿಷ್ಣುಮೂರ್ತಿ ವಯನಾಟ್ ಕುಲವನ್ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದ ಪ್ರಯುಕ್ತ ದೈವಸ್ಥಾನದ ಆಡಳಿತ ಸಮಿತಿ ಹಾಗೂ ಊರ ಭಕ್ತಾಭಿಮಾನಿಗಳ ವಿಶೇಷ ಸಭೆಯು ಸೋಣಂಗೇರಿಯ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಸೆ.30ರಂದು ನಡೆಯಲಿದೆ.

ಅ.27ರಂದು ಶ್ರೀ ವಿಷ್ಣುಮೂರ್ತಿ ಹಾಗೂ ನಾಗದೇವರ ಬಾಲಾಲಯ ಪ್ರತಿಷ್ಠೆ, ಅ.31ರಂದು ಶ್ರೀ ವಯನಾಟ್ ಕುಲವನ್ ಹಾಗೂ ಕೊರತ್ತಿ ದೈವಗಳ ಬಾಲಾಲಯ ಪ್ರತಿಷ್ಠೆ, ಅ.31ರಂದು ಮಹೂರ್ತದ ಮರ ಕಡಿಯುವುದು, ಸೇರಿದಂತೆ ಜೀರ್ಣೋದ್ಧಾರ ಕಾರ್ಯಗಳ ಬಗ್ಗೆ ನಿಧಿ ಸಂಗ್ರಹಿಸುವ ಬಗ್ಗೆ ವಿಚಾರ ವಿನಿಮಯ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಲಿದೆ.