ಮುರುಳ್ಯ : ಕಾಲುಬಾಯಿ ರೋಗ ಲಸಿಕಾ ಅಭಿಯಾನ ಕಾರ್ಯಕ್ರಮ

0

ಕರ್ನಾಟಕ ಸರ್ಕಾರ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಮತ್ತು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ನಿ) ಇದರ ಸಹಯೋಗದಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಕಾರ್ಯಕ್ರಮ ನಡೆಯಿತು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರ ಮನೆಯಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವೇದಿಕೆಯಲ್ಲಿ ಹರ್ಷನ್ ಕೆ ವಿ, ಜಾನಕಿ ಮುರುಳ್ಯ, ವಸಂತ ನಡುಬೈಲು, ಸೀತಾರಾಮ ಗೌಡ, ಭುವನೇಶ್ವರ ಗೌಡ, ವಸಂತ ಹುದೇರಿ, ನಿತಿನ್ ಪ್ರಭು, ಅಜಿತ್ ಕೆ ವಿ, ಸಿಬ್ಬಂದಿಗಳು ಹಾಗೂ ಕೃಷಿಕರು, ಸ್ಥಳೀಯರು ಉಪಸ್ಥಿತರಿದ್ದರು.