ಕುಕ್ಕೆ ಕ್ಷೇತ್ರದಲ್ಲಿ ದೇವಳದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಗಾಂಧಿ ಜಯಂತಿಯ ಪುಣ್ಯ ದಿನವಾದ ಈ ದಿನದಂದು ಸರಕಾರದ ನಿರ್ದೇಶನದಂತೆ ಬೃಹತ್ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.

ಸ್ವಚ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾl ನಿಂಗಯ್ಯ ಅವರು “ಕೇಂದ್ರ ಹಾಗೂ ರಾಜ್ಯ ಸರಕಾರದ ನಿರ್ದೇಶನ ಸೂಚನೆಯಂತೆ ನಮ್ಮ ಕ್ಷೇತ್ರದಲ್ಲಿ ನಮ್ಮ ದೇವಳದ ಎಲ್ಲಾ ಸಿಬ್ಬಂದಿಯವರನ್ನು ಒಳಗೊಂಡಂತೆ ಸ್ವಚ್ಛತಾ ಕಾರ್ಯಕ್ರಮವನ್ನು ನಾವು ಈ ದಿನ ಕೈಗೊಂಡಿರುತ್ತೇವೆ .ದೇವಸ್ಥಾನದ ಮುಂಭಾಗದ ರಥ ಬೀದಿ, ಪಾರ್ಕಿಂಗ್ ಸ್ಥಳಗಳು,

ಆದಿ ಸುಬ್ರಹ್ಮಣ್ಯ ಸುತ್ತಮುತ್ತಲಿನ ವಠಾರ, ದೇವಸ್ಥಾನದ ಸುತ್ತಮುತ್ತಲು ಇತ್ಯಾದಿಗಳನ್ನೊಳಗೊಂಡಂತೆ ಸ್ವಚ್ಛತೆಯನ್ನ ಮಾಡಲಿದ್ದೇವೆ ಎಂದು ನುಡಿದರು. ಈ ಸಂದರ್ಭ ದೇವಸ್ಥಾನದ ಸಿಬ್ಬಂದಿ ವರ್ಗದವರು ಹಾಜರಿದ್ದರು.