ಗೌರಿಪುರಂ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಪ್ರಥಮ ಹಂತದ ಶಿಲೆ ಆಗಮನ, ಭಕ್ತಿಪೂರ್ವಕ ಮೆರವಣಿಗೆ

0

ಅ. 27ರಂದು ಬೆಳ್ಳಾರೆ ಗೌರಿಪುರಂನಲ್ಲಿ ಶ್ರೀ ರಾಜರಾಜೇಶ್ವರಿ ದೇವಿಯ ಭವ್ಯ ದೇಗುಲ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ಅ. 15ರಂದು ಪ್ರಥಮ ಹಂತದ ಶಿಲಾಗಮನ ನಡೆಯಿತು. ಈ ಸಂದರ್ಭದಲ್ಲಿ ಬೆಳ್ಳಾರೆಯ ಮಾಸ್ತಿಕಟ್ಟೆ ಬಳಿ ಶಿಲಾ ವಾಹನಕ್ಕೆ ಭವ್ಯ ಸ್ವಾಗತ ಮಾಡಲಾಯಿತು. ಬಳಿಕ ಮಾಸ್ತಿಕಟ್ಟೆಯಿಂದ ಗೌರಿಪುರಂ ಕ್ಷೇತ್ರದ ತನಕ ವಾಹನ ಮೆರವಣಿಗೆಯ ಮೂಲಕ ತೆರಳಲಾಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ತೆಂಗಿನಕಾಯಿ ಒಡೆದು ಮೆರವಣಿಗೆಗೆ ನ ದ ಚಾಲನೆ ನೀಡಿದರು. ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಮೋಹನ ಗೌಡ ಇಡ್ಯಡ್ಕ, ಆಡಳಿತ ಸಮಿತಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು, ಕಾರ್ಯದರ್ಶಿ ಮಹಾಲಿಂಗ ಪಾಟಾಳಿ ಕುರುಂಬುಡೇಲು, ಕೋಶಾಧಿಕಾರಿ ಆನಂದ ಗೌಡ ಪಡ್ಪು ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಮೆರವಣಿಗೆಯಲ್ಲಿ ಭಾಗವಹಿಸಿದರು.