ಕೋಲ್ಚಾರು: ಕುಡೆಂಬಿ ಎಂಬಲ್ಲಿ ಕೆರೆಗೆ ಬಿದ್ದು ವಿವಾಹಿತ ಮಹಿಳೆ ಮೃತ್ಯು

0

ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಲ್ಚಾರಿನ ಕುಡೆಂಬಿ ಎಂಬಲ್ಲಿ ಮಹಿಳೆಯೋರ್ವರು ಕೆರೆಗೆ ಬಿದ್ದು ಮೃತ ಪಟ್ಟ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ.


ಮೃತ ಪಟ್ಟ ಮಹಿಳೆ ಗಿರೀಶ್ ಪಡ್ಡಂಬೈಲು ರವರ ಪತ್ನಿ ಶ್ರೀಮತಿ ತೀರ್ಥಕುಮಾರಿ( 31) ಎಂದು ತಿಳಿದು ಬಂದಿದೆ. ಇವರನ್ನು ಕಳೆದ ಒಂದು ವಾರದ ಹಿಂದೆ ಪುತ್ತೂರಿನ ಸಿಟಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ನಿನ್ನೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕರೆದುಕೊಂಡು ಬರಲಾಗಿತ್ತು.
ಅವರು ರಾತ್ರಿ ವೇಳೆಯಲ್ಲಿ ಮನೆಯವರು ಮಲಗಿದ್ದ ನಂತರ ಎದ್ದು ಹೋಗಿದ್ದು ಬೆಳಗ್ಗೆ ಎದ್ದು ನೋಡಿದಾಗ ಕಾಣಿಸಿಲ್ಲವಾದ್ದರಿಂದ ಹುಡುಕಾಟ ನಡೆಸಿದಾಗ ಪಕ್ಕದ ಮನೆಯ ಕುಡೆಂಬಿ ಗುಡ್ಡಪ್ಪ ರವರ ತೋಟದ ಕೆರೆಯಲ್ಲಿ ಬಿದ್ದಿರುವುದಾಗಿ ಕಂಡು ಬಂತು.


ಇವರು ಕಳೆದ ಹಲವು ಸಮಯಗಳಿಂದ
ಮಾನಸಿಕವಾಗಿ ಅಸ್ವಸ್ಥಗೊಂಡಿದ್ದರೆಂದು ತಿಳಿದು ಬಂದಿದೆ. ಇದರಿಂದಾಗಿ ರಾತ್ರಿ ಸಮಯದಲ್ಲಿ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಆಕಸ್ಮಾತ್ತಾಗಿ ಕಾಲು ಜಾರಿ ಕೆರೆಗೆ ಬಿದ್ದಿರಬಹುದೇ ಅಥವಾ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಹಬ್ಬಿದೆ.
ಸ್ಥಳಕ್ಕೆ ಸುಳ್ಯ ಪೋಲಿಸರು ಆಗಮಿಸಿ ಮಹಜರು ನಡೆಸಿ ಶವವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಪೋಸ್ಟ್ ಮಾರ್ಟಂ ಮಾಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಮೃತರು ಓರ್ವ ಪುತ್ರ 2 ನೇ ತರಗತಿ ತನುಷ್ ಮತ್ತು 3 ವರ್ಷದ ಹೆಣ್ಣು ಮಗು ವೀಕ್ಷಾ ಹಾಗೂ ಬಂಧು ವರ್ಗದವರನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.